masthmagaa.com:
ಚುನಾವಣೆ ಒಂದು ವರ್ಷ ಇರೋವಾಗ್ಲೆ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಮಾಡೋ ಬೆಳವಣಿಗೆಗಳು ಸಣ್ಣದಾಗಿ ಶುರುವಾಗಿವೆ. ಮೊನ್ನೆ ಸಿಎಂ ಇಬ್ರಾಹಿಂ ಕಾಂಗ್ರೇಸ್ ಬಿಟ್ಟು ಜೆಡಿಎಸ್ ಸೇರಿದ್ರು, ಇವತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿ ಸೇರೋದಾಗಿ ಹೇಳಿದ್ದಾರೆ. ಜೊತೆಗೆ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಇಂದ ಸ್ಪರ್ಧಿಸೋಕೆ, ಎಚ್.ಡಿ ಕುಮಾರಸ್ವಾಮಿ ಮುಕ್ತವಾಗಿ ಒಪ್ಪಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಈ ಹಿಂದೆ ಬೆಂಗಳೂರು ಪೋಲಿಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಸೇರೋದಾಗಿ ಹೇಳಿದ್ದಾರೆ. ರೇಲ್ವೆ ಪೋಲಿಸ್ ಎಡಿಜಿಪಿ ಆಗಿದ್ದ ಇವ್ರು ಕಳೆದ ಸೆಪ್ಟಂಬರ್ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ರು. ಸರ್ಕಾರ ಕಳೆದವಾರವಷ್ಟೇ ಅದನ್ನ ಅಂಗೀಕರಿಸಿತ್ತು.
-masth
Contact Us for Advertisement