masthmagaa.com:
ಪೆಗಾಸಸ್ ಫೋನ್ ಹ್ಯಾಕಿಂಗ್ ಸ್ಕ್ಯಾಂಡಲ್ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಂದು ತನಿಖಾ ತಂಡವನ್ನು ರಚಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿಗಳಾದ ಜ್ಯೋತಿರ್ಮೈ ಭಟ್ಟಾಚಾರ್ಯ ಮತ್ತು ಎಂಬಿ ಲೋಕುರ್ ಈ ತಂಡದಲ್ಲಿದ್ದಾರೆ. ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿಯವರ ಅಳಿಯ ಅಭಿಷೇಕ್ ಬ್ಯಾನರ್ಜಿಯವರ ಫೋನ್ ಕೂಡ ಪೆಗಾಸಸ್ ಲಿಸ್ಟ್ನಲ್ಲಿರೋದು ಗೊತ್ತಾಗಿತ್ತು. ಅದ್ರ ಬೆನ್ನಲ್ಲೇ ದೀದಿ ಈ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮಮತಾ ಬ್ಯಾನರ್ಜಿ, ಸರ್ಕಾರವೇ ಈ ಬಗ್ಗೆ ತನಿಖೆ ನಡೆಸುತ್ತೇನೋ ಅಂತ ಕಾದು ನೋಡಿದ್ವಿ. ಆದ್ರೆ ಸರ್ಕಾರ ಯಾವುದೇ ರೀತಿಯ ಹೆಜ್ಜೆ ಇಡಲಿಲ್ಲ. ಅದ್ಕೆ ನಾವೇ ಒಂದು ತನಿಖಾ ತಂಡ ರಚಿಸಿದೀವಿ ಅಂತ ಹೇಳಿದ್ದಾರೆ. ಈ ಕಡೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪ್ತ ಮತ್ತು ಇಡಿ ಅಧಿಕಾರಿಗಳ ಹೆಸರು ಕೂಡ ಪೆಗಾಸಸ್ ಲಿಸ್ಟ್ನಲ್ಲಿರೋದು ಗೊತ್ತಾಗಿದೆ.
-masthmagaa.com
Contact Us for Advertisement