ಕಾರು ಅಡ್ಡಗಟ್ಟಿ ಮಹಿಳೆಯನ್ನು ಹತ್ಯೆಗೈದ ದುಷ್ಟರು!

masthmagaa.com:

ಕಾರು ಅಡ್ಡಗಟ್ಟಿ ಮಹಿಳೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 40 ವರ್ಷದ ಅರ್ಚನಾ ರೆಡ್ಡಿ ಕೊಲೆಯಾಗಿರುವ ಮಹಿಳೆ. ಇವರು ಮೂಲತಃ ಆನೇಕಲ್​ ತಾಲೂಕಿನ ಜಿಗಣಿ ನಿವಾಸಿಯಾಗಿದ್ರು. ಅನೈತಿಕ ಸಂಬಂಧ ಮತ್ತು ಹಣಕಾಸು ವಿಚಾರ ಸಂಬಂಧ ಕೊಲೆ ನಡೆದಿರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಘಟನೆ ನಡೆಯೋವಾಗ ಕಾರಿನಲ್ಲಿದ್ದ ಅರ್ಚನಾ ರೆಡ್ಡಿಯ ಪುತ್ರ ಮತ್ತು ಚಾಲಕ ಕಾರಿನಿಂದ ಇಳಿದು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply