masthmagaa.com:
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೈಗೊಂಡಿದ್ದ ಮಹತ್ವದ ಭಾರತ್ ಜೋಡೊ ಯಾತ್ರೆಗೆ ಇಂದು ಅಂತಿಮ ತೆರೆಬಿದ್ದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4 ಸಾವಿರ ಕಿಲೋಮೀಟರ್ ಯಾತ್ರೆ ಇಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಕಾಂಗ್ರೆಸ್ ಅದ್ಧೂರಿ ಸಮಾರೋಪ ಸಮಾರಂಭ ಏರ್ಪಡಿಸಿದೆ. ಈ ವೇಳೆ ಮಾತಾಡಿದ ರಾಹುಲ್, ನಾನು ಈ ಯಾತ್ರೆಯನ್ನ ನನಗೋಸ್ಕರ ಅಥ್ವಾ ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿಲ್ಲ. ಬದ್ಲಾಗಿ ದೇಶದ ಜನರಿಗಾಗಿ ಹಾಗೂ ದೇಶದ ಅಡಿಪಾಯವನ್ನ ನಾಶ ಮಾಡೋಕೆ ನೋಡ್ತಿರೋ ಸಿದ್ಧಾಂತಗಳ ವಿರುದ್ಧ ಯಾತ್ರೆ ಕೈಗೊಳ್ಳಲಾಗಿತ್ತು ಅಂತ ಹೇಳಿದ್ದಾರೆ. ಜೊತೆಗೆ ನನ್ನ ರೀತಿಯಾಗಿ ಬಿಜೆಪಿಯ ಯಾವ ನಾಯಕರು ಕಾಶ್ಮೀರದಲ್ಲಿ ಯಾತ್ರೆ ಮಾಡೋದಿಲ್ಲ. ಯಾಕಂದ್ರೆ ಅವ್ರು ಭಯ ಪಡ್ತಾರೆ ಆದ್ರೆ ನಾನು ನನ್ನ ಕುಟುಂಬ ಮತ್ತು ಗಾಂಧೀಜಿ ಅವ್ರಿಂದ ಭಯರಹಿತ ಜೀವನ ಮಾಡೋದನ್ನ ಕಲಿತಿದ್ದೇನೆ ಅಂತ ಹೇಳಿದ್ದಾರೆ. ಜೊತೆಗೆ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂದಿ ಅವ್ರು ಭಾರತ್ ಜೋಡೊ ಯಾತ್ರೆಯನ್ನ ಚುನಾವಣೆ ಗೆಲ್ಲೋದಕ್ಕಾಗಿ ಮಾಡಿಲ್ಲ. ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಹಬ್ಬಿಸಿರೋ ದ್ವೇಷದ ವಿರುದ್ಧ ಯಾತ್ರೆ ನಡೆಸಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement