ಹೋಮ ಕುಂಡದಲ್ಲಿ ಹೆಣ ಸುಟ್ಟವರಿಗೆ ಜೀವಾವಧಿ ಶಿಕ್ಷೆ!

masthmagaa.com:

ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಕೇಸಲ್ಲಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಮತ್ತು ಪತ್ನಿ ಗೆಳೆಯ ನಿರಂಜನ್ ಭಟ್​​​​​​​ಗೆ ಉಡುಪಿ ಜಿಲ್ಲಾ ಕೋರ್ಟ್​​ ಜೀವಾವಧಿ ಶಿಕ್ಷೆ ನೀಡಿದೆ.
ಈ ಸುದ್ದಿ ಯಾಕ್ ತಗೊಂಡ್ವಿ ಅಂದ್ರೆ ಇದು ಸ್ವಲ್ಪ ಇಂಟರೆಸ್ಟಿಂಗ್ ಆಗಿದೆ. ಭಾಸ್ಕರ್ ಶೆಟ್ಟಿ ದುಬೈನಲ್ಲಿ ಬ್ಯುಸಿನೆಸ್ ಮಾಡ್ಕೊಂಡಿದ್ರು. ಆದ್ರೆ 2016ರ ಜುಲೈ 31ರಂದು ಭಾಸ್ಕರ್ ಶೆಟ್ಟಿ ಕಾಣೆಯಾಗಿದ್ದಾನೆ ಅಂತ ಅವರ ತಾಯಿ ದೂರು ನೀಡಿದ್ರು. ನಂತರ ಫೀಲ್ಡ್​​ಗಿಳಿದ ಪೊಲೀಸರಿಗೆ ಭಾಸ್ಕರ್ ಶೆಟ್ಟಿ ಕಾಣೆಯಾಗಿಲ್ಲ. ಕೊಲೆಯಾಗಿದ್ದಾರೆ ಅಂತ ಗೊತ್ತಾಗುತ್ತೆ. ಇದ್ರಲ್ಲಿ ಭಾಸ್ಕರ್ ಶೆಟ್ಟಿ ಪತ್ನಿ 50 ವರ್ಷ ರಾಜೇಶ್ವರಿ, 26 ವರ್ಷದ ಜ್ಯೋತಿಷಿ ನಿರಂಜನ್ ಭಟ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ರು. ಈ ವಿಚಾರ ಗೊತ್ತಾದ ಭಾಸ್ಕರ್ ಶೆಟ್ಟಿ ತನ್ನೆಲ್ಲಾ ಆಸ್ತಿಯನ್ನು ತಾಯಿ ಹೆಸರಿಗೆ ವರ್ಗಾಯಿಸೋಕೆ ಪ್ಲಾನ್ ಮಾಡಿದ್ರು. ಆದ್ರೆ ಈ ವಿಚಾರ ಗೊತ್ತಾದ ರಾಜೇಶ್ವರಿ ತನ್ನ 20 ವರ್ಷದ ಮಗ ನವನೀತ್​​ನನ್ನು ಪುಸಲಾಯಿಸಿ, ನಿರಂಜನ್ ಜೊತೆ ಸೇರಿಕೊಂಡು ಭಾಸ್ಕರ್​​​ ಶೆಟ್ಟಿ ಕೊಲೆ ಮಾಡಿದ್ರು,. ನಂತರ ಹೋಮ ಕುಂಡದಲ್ಲಿ ಸುಟ್ಟು, ಅವಶೇಷಗಳನ್ನು ನದಿಗೆ ಎಸೆದಿದ್ರು ಅನ್ನೋ ವಿಚಾರ ಬಯಲಿಗೆ ಬಂದಿತ್ತು.

-masthmagaa.com

Contact Us for Advertisement

Leave a Reply