ಬಿಗ್‌ಬಾಸ್‌ ಮನೆಯಲ್ಲಿ ಅರಣ್ಯಾಧಿಕಾರಿಗಳ ಎಂಟ್ರಿ: ವರ್ತೂರ್‌ ಸಂತೋಷ್‌ ಅರೆಸ್ಟ್‌

masthmagaa.com:

ಕನ್ನಡ ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲ ಮೊದಲ ಬಾರಿಗೆ ಬಿಗ್‌ ಬಾಸ್‌ ಮನೆ ಒಳಗೆ ಅರಣ್ಯಾಧಿಕಾರಿಗಳ ಎಂಟ್ರಿ ಆಗಿದೆ. ಬಿಗ್‌ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ ಅವ್ರನ್ನ ರಾಮೋಹಳ್ಳಿ ಅರಣ್ಯ ಅಧಿಕಾರಿಗಳು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ. ಹುಲಿ ಉಗುರಿನ ಪೆಂಡೆಂಟ್‌ ಹಾಕಿಕೊಂಡ ಆರೋಪದಲ್ಲಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಬಂಧಿಸಲಾಗಿದೆ. ನಾನ್ ಬೇಲೆಬಲ್ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಲ್ದೇ ಅವ್ರನ್ನ ಕೋರ್ಟ್‌ಗೆ ಹಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂದ್ಹಾಗೆ ವಿಚಾರಣೆ ವೇಳೆ ಹುಲಿ ಉಗುರು ಧರಿಸಿರೋದು ಸ್ಪಷ್ಟವಾಗಿದೆ ಅಂತ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಅವ್ರು ಹೇಳಿದ್ದಾರೆ. ವಿಚಾರಣೆ ವೇಳೆ ಅಪರಿಚಿತರು ಹುಲಿ ಉಗುರನ್ನ ಮಾರಾಟಕ್ಕೆ ತಂದಿದ್ರು. ಅವ್ರು ಎಲ್ಲಿಂದ ಬಂದಿದ್ರು, ಅವ್ರು ಯಾರು ಅನ್ನೊದು ನನಗೆ ಗೊತ್ತಿಲ್ಲ. ಮಾರಾಟ ಮಾಡುವ ವಿಷಯ ಗೆಳೆಯರಿಂದ ತಿಳಿತು. ಹಣ ಕೊಟ್ಟು ಖರೀದಿ ಮಾಡಿದ್ದೇನೆ ಅಂತ ಸಂತೋಷ್‌ ಅಧಿಕಾರಿಗಳ ಮುಂದೆ ಹೇಳಿರೋದಾಗಿ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ ಸಂತೋಷ್‌ ಹುಲಿ ಉಗುರನ್ನ ಧರಿಸೊ ಕುರಿತು ಶರತ್‌ ಅನ್ನೊರು ದೂರು ನೀಡಿದ್ರು ಎನ್ನಲಾಗಿದೆ.) ಇನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಸಂತೋಷ್ ಅವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. ಹಾಗೂ 10,000 ರಿಂದ 25,000ರೂಪಾಯಿವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply