ಅಕ್ರಮ ಬಯಲಿಗೆಳೆದ ಪತ್ರಕರ್ತ ನಾಪತ್ತೆ, ಈಗ ಶವವಾಗಿ ಪತ್ತೆ!

masthmagaa.com:

ಬಿಹಾರದಲ್ಲಿ 4 ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಪತ್ರಕರ್ತ ಮತ್ತು ಆರ್​ಟಿಐ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಮಧುಬನಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿ ಪತ್ತಕರ್ತ ಬುದ್ಧಿನಾಥ್ ಜಾರ ಸುಟ್ಟ ದೇಹವನ್ನು ಎಸೆದು ಹೋಗಿದ್ದಾರೆ. ಈತ ನಾಪತ್ತೆಯಾಗೋಕು 2 ದಿನ ಮುನ್ನ ಫೇಸ್​ಬುಕ್​​​ನಲ್ಲಿ ಒಂದು ಒಂದು ವರದಿ ಪೋಸ್ಟ್ ಮಾಡಿದ್ರು. ಅದ್ರಲ್ಲಿ ಕೆಲವೊಂದು ಮೆಡಿಕಲ್ ಕ್ಲಿನಿಕ್​​ಗಳು ಫೇಕ್ ಅಂತ ಹೇಳಿದ್ರು. ಇದಾದ ಬಳಿಕ ಹಲವು ಕ್ಲಿನಿಕ್​​ಗಳು ಮುಚ್ಚಿದ್ರೆ, ಮತ್ತಷ್ಟು ಕ್ಲಿನಿಕ್​​ಗಳ ಮೇಲೆ ದಂಡ ವಿಧಿಸಲಾಗಿತ್ತು. ಈ ವೇಳೆ ಬುದ್ಧಿನಾಥ್​​​​ಗೆ ಬೆದರಿಕೆ ಕರೆಗಳ ಜೊತೆಗೆ ಲಕ್ಷಗಟ್ಟಲೆ ಲಂಚದ ಆಫರ್​​ಗಳು ಕೂಡ ಬಂದಿದ್ವು. ಆದ್ರೆ ನಂತರ ಅಪಹರಿಸಿದ್ದ ದುಷ್ಕರ್ಮಿಗಳು ಈಗ ಹತ್ಯೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply