masthmagaa.com:
ಬಿಹಾರದಲ್ಲಿ 4 ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಪತ್ರಕರ್ತ ಮತ್ತು ಆರ್ಟಿಐ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಮಧುಬನಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿ ಪತ್ತಕರ್ತ ಬುದ್ಧಿನಾಥ್ ಜಾರ ಸುಟ್ಟ ದೇಹವನ್ನು ಎಸೆದು ಹೋಗಿದ್ದಾರೆ. ಈತ ನಾಪತ್ತೆಯಾಗೋಕು 2 ದಿನ ಮುನ್ನ ಫೇಸ್ಬುಕ್ನಲ್ಲಿ ಒಂದು ಒಂದು ವರದಿ ಪೋಸ್ಟ್ ಮಾಡಿದ್ರು. ಅದ್ರಲ್ಲಿ ಕೆಲವೊಂದು ಮೆಡಿಕಲ್ ಕ್ಲಿನಿಕ್ಗಳು ಫೇಕ್ ಅಂತ ಹೇಳಿದ್ರು. ಇದಾದ ಬಳಿಕ ಹಲವು ಕ್ಲಿನಿಕ್ಗಳು ಮುಚ್ಚಿದ್ರೆ, ಮತ್ತಷ್ಟು ಕ್ಲಿನಿಕ್ಗಳ ಮೇಲೆ ದಂಡ ವಿಧಿಸಲಾಗಿತ್ತು. ಈ ವೇಳೆ ಬುದ್ಧಿನಾಥ್ಗೆ ಬೆದರಿಕೆ ಕರೆಗಳ ಜೊತೆಗೆ ಲಕ್ಷಗಟ್ಟಲೆ ಲಂಚದ ಆಫರ್ಗಳು ಕೂಡ ಬಂದಿದ್ವು. ಆದ್ರೆ ನಂತರ ಅಪಹರಿಸಿದ್ದ ದುಷ್ಕರ್ಮಿಗಳು ಈಗ ಹತ್ಯೆ ಮಾಡಿದ್ದಾರೆ.
-masthmagaa.com
Contact Us for Advertisement