ಸಜೀವ ದಹನ ಮಾಡೋಕು ಮುಂಚೆ ಥಳಿತ: ಮರಣೋತ್ತರ ವರದಿ

masthmagaa.com:

ಮನೆಗೆ ಬೆಂಕಿ ಇಟ್ಟು 8 ಜನರ ಸಜೀವ ದಹನ ಮಾಡಿದ ಪ್ರಕರಣದಲ್ಲಿ, ಟಿಎಂಸಿಯ ವ್ಯಕ್ತಿ ಇದ್ರೆ ಮುಲಾಜಿಲ್ಲದೇ ಅವ್ರನ್ನು ಅರೆಸ್ಟ್‌ ಮಾಡಿ ಅಂತ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪೋಲಿಸರಿಗೆ ಆದೇಶಿಸಿದ್ದಾರೆ. ಘಟನೆ ನಡೆದ ಸ್ಥಳ ಬಿರ್ಭಮ್‌ಗೆ ಇವತ್ತು ಮಧ್ಯಾನ ಭೇಟಿ ನೀಡಿದ ಅವ್ರು, ಮೃತರ ಕುಟುಂಬದವರೊಂದಿಗೆ ಮಾತಾಡಿದ್ದಾರೆ. ನಂತ್ರ ಮಾತಾಡಿ, ತಪ್ಪಿತಸ್ಥರನ್ನು ಕೂಡಲೇ ಹುಡುಕಬೇಕು ಮತ್ತು ಸಾಕ್ಷಿಗಳಿಗೆ ರಕ್ಷಣೆ ಕೊಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಟಿಎಂಸಿ ನಾಯಕ ಅನರುಲ್‌ ಶೇಖ್‌ನನ್ನ ಅರೆಸ್ಟ್‌ ಮಾಡಿ ಅಂತ ಪೋಲಿಸರಿಗೆ ಸೂಚಿಸಿದ್ದಾರೆ. ಜೊತೆಗೆ ಬೆಂಕಿಗೆ ಆಹುತಿಯಾದ ಮನೆಗಳ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಿ, ಉದ್ಯೋಗದ ಭರವಸೆ ನೀಡಿದ್ದಾರೆ. ಜೊತೆಗೆ ಈ ಘಟನೆ ಹಿಂದೆ ದೊಡ್ಡ ಷಡ್ಯತ್ರ ಇದೆ ಅಂತ ಆರೋಪಿಸಿದ್ದಾರೆ. ಇನ್ನು ಘಟನೆಯಲ್ಲಿ ಹತ್ಯೆಯಾದ 8 ಜನರ ಮೇಲೆ ಬೆಂಕಿ ಹಾಕಿ ಕೊಲ್ಲೋಕು ಮುಂಚೆ ವಿಪರೀತ ಹಲ್ಲೆ ಮಾಡಲಾಗಿತ್ತು ಅಂತ ಫೊರೆನ್ಸಿಕ್‌ ವರದಿ ಹೇಳಿದೆ. ಇನ್ನು ಈ 8 ಜನರಲ್ಲಿ ಮೂವರು ಮಹಿಳೆಯರು ಮತ್ತು ಇಬ್ರು ಮಕ್ಕಳು ಕೂಡ ಇದ್ರು ಅಂತ ಗೊತ್ತಾಗಿದೆ. ಈ ಘಟನೆಯ ಬಗ್ಗೆ ಪ್ರಧಾನಿ ನರೇಂ‌ದ್ರ ಮೋದಿ ಕೂಡ ಮಾತಾಡಿದ್ದು, ಇಂತ ಹೇಯ ಕೃತ್ಯಕ್ಕೆ ಕಾರಣ ಆದವರನ್ನ ರಾಜ್ಯ ಸರ್ಕಾರ ಶಿಕ್ಷಿಸುತ್ತೆ ಅಂತ ಅಂದ್ಕೊಂಡಿದೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply