masthmagaa.com:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ, ಸುಳ್ಳು ಎಫ್ಐಆರ್ ಹಾಗೂ ಕಾನೂನಾತ್ಮಕ ದೌರ್ಜನ್ಯ ನಡೆಸುವ ಸಾಧ್ಯತೆಯಿದೆ ಅಂತ ಬಿಜೆಪಿ ಅರೋಪಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅದನ್ನು ಸಮರ್ಥವಾಗಿ ಫೇಸ್ ಮಾಡೋಕೆ ಒಂದು ವಾರದೊಳಗೆ ಸಹಾಯವಾಣಿ ಸೇವೆ ಆರಂಭಿಸೋದಾಗಿ ಬಿಜೆಪಿ ಪ್ರಕಟಿಸಿದೆ. ಕಾಂಗ್ರೆಸ್ ಸರ್ಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ ತಡೆಗೆ ಶೀಘ್ರವೇ ರಾಜ್ಯ ಕಾನೂನು ಘಟಕದಿಂದ ಹೆಲ್ಪ್ಲೈನ್ ಆರಂಭಿಸಲಾಗುತ್ತೆ. ಕಾರ್ಯಕರ್ತರಿಗೆ ನೆರವಾಗುವ ಈ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಅಂತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಕೂಡ ಹೊಸ ಸಹಾಯವಾಣಿ ಆರಂಭಿಸೋಕೆ ಮುಂದಾಗಿದೆ. ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇಡಲು, ‘ಶಾಂತಿಯುತ ಕರ್ನಾಟಕ’ ಅನ್ನೊ ಹೊಸ ಸಹಾಯವಾಣಿಯನ್ನ ಸ್ಥಾಪಿಸಿ ಅಂತ ಸಚಿವ ಎಂ.ಬಿ.ಪಾಟೀಲ್ ಅವ್ರು ಸಿಎಂ ಸಿದ್ದರಾಮಯ್ಯ ಅವ್ರ ಬಳಿ ಮನವಿ ಮಾಡಿದ್ದಾರೆ.
-masthmagaa.com
Contact Us for Advertisement