ಉತ್ತರಾಖಂಡ್ ಸಿಎಂ ಆಗುತ್ತಲೇ ಪುಷ್ಕರ್ ಸಿಂಗ್ ಧಾಮಿ ವಿವಾದ!

masthmagaa.com:

ಉತ್ತರಾಖಂಡ್ ಹೊಸ​ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ 4 ತಿಂಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ 3ನೇ ಸಿಎಂ ಇವರಾಗಿದ್ದಾರೆ. ಅದ್ರೆ ಅದ್ರ ಬೆನ್ನಲ್ಲೇ ಹೊಸ ವಿವಾದವೊಂದರಲ್ಲಿ ಸಿಲುಕಿದ್ದಾರೆ. 2015ರ ಆಗಸ್ಟ್ 14ರಂದು ಇವರು ಅಖಂಡ ಭಾರತ ಅಂತ ಹೇಳ್ಕೊಂಡು ಒಂದು ಮ್ಯಾಪ್​ನ್ನು ಟ್ವೀಟ್ ಮಾಡಿದ್ರು. ಅದ್ರಲ್ಲಿ ಅಖಂಡ ಭಾರತ, ಪ್ರತಿಯೊಬ್ಬ ದೇಶಭಕ್ತನ ಕನಸು ಅಂತ ಕೂಡ ಬರೆಯಲಾಗಿತ್ತು. ಇದ್ರಲ್ಲಿ ಲಡಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನೇ ಭಾರತದಿಂದ ಹೊರಗಿಡಲಾಗಿದೆ. ಇದೀಗ ಇದನ್ನೇ ಅಸ್ತ್ರ ಮಾಡಿರೋ ವಿಪಕ್ಷಗಳು ಉತ್ತರಾಖಂಡ್ ಮುಖ್ಯಮಂತ್ರಿ 2015ರಲ್ಲಿ ಭಾರತದ ಮ್ಯಾಪನ್ನು ತಪ್ಪಾಗಿ ಬಿಂಬಿಸಿದ್ರು ಅಂತ ಆರೋಪಿಸಿವೆ.

-masthmagaa.com

Contact Us for Advertisement

Leave a Reply