masthmagaa.com:
ʻಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷ ಒಡ್ಡಿ, ರಾಜೀನಾಮೆ ನೀಡಲು ಬಿಜೆಪಿ ಒತ್ತಾಯ ಮಾಡ್ತಿದೆ’ ಅಂತ ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ. ʻಮುಂದಿನ ಚುನಾವಣೆ ವೆಚ್ಚವನ್ನ ತಾನೇ ಭರಿಸೊದಾಗಿ ಬಿಜೆಪಿ ನಮ್ಮ ಶಾಸಕರಿಗೆ ಆಫರ್ ಮಾಡ್ತಿದೆ. ಇವೆಲ್ಲ ಕಪ್ಪು ಹಣ ಅಲ್ವಾ? ಬಿಜೆಪಿ ಸೋಲಿನ ಭಯದಿಂದ ಕಾಂಗ್ರೆಸ್ ಅಕೌಂಟ್ ಫ್ರೀಜ್ ಆಗಿದೆ. ಸಂಸದೀಯ ವ್ಯವಸ್ಥೆಯನ್ನೇ ಬಿಜೆಪಿ ನಾಶ ಮಾಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆʼ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದಿದ್ದ ಮರಿತಿಬ್ಬೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ CM-DCM ಸಮ್ಮುಖದಲ್ಲಿ ಮರಿತಿಬ್ಬೇಗೌಡ ಕೈ ಹಿಡಿದಿದ್ದಾರೆ ಅಂದ್ರೆ ಕಾಂಗ್ರೆಸ್ ಜಾಯಿನ್ ಆಗಿದ್ದಾರೆ.
-masthmagaa.com
Contact Us for Advertisement