ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಯಡಿಯೂರಪ್ಪ ಬೆಂಬಲಿಗ ನಂಜುಂಡಸ್ವಾಮಿ, ಲಿಂಗಾಯರು ಬಿಎಸ್ವೈ ಕಡೆಯವರು ಅನ್ನೋ ಕಾರಣಕ್ಕೆ ನಮಗೆ ಕಚೇರಿ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ. ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನೂ ಲಿಂಗಾಯತ ಎಂಬ ಕಾರಣಕ್ಕೆ ತೆಗೆಯಲಾಗಿದೆ. ಈ ಮೂಲಕ ಬಿಎಸ್ವೈ ಬೆಂಬಲಿಗರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ನಾವು ಈವರೆಗೆ 10-12 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇವೆ. ಯಡಿಯೂರಪ್ಪ ಸಿಎಂ ಆದ ಬಳಿಕ ಎಲ್ಲರೂ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೆವು. ಆದ್ರೆ ಬಿಎಸ್ವೈ ಸಿಎಂ ಆದ ಬಳಿಕ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಅಧ್ಯಕ್ಷರ ಬದಲಾವಣೆ ಬೆನ್ನಲ್ಲೇ ಲಿಂಗಾಯತರನ್ನು ನಿರ್ಲಕ್ಷಿಸಲು ಆರಂಭಿಸಲಾಯ್ತು ಎಂದು ಆರೋಪಿಸಲಾಗಿದೆ.
Contact Us for Advertisement