masthmagaa.com:
ಈಗಿನ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವಿಲ್ಲ. ಇದನ್ನ ಅರ್ಥ ಮಾಡಿಕೊಂಡು ಸಾರಿಗೆ ನೌಕರರು ಮುಷ್ಕರನ್ನ ಅಂತ್ಯಗೊಳಿಸಿ ಬಸ್ ಸಂಚಾರ ಆರಂಭಿಸಬೇಕು ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
9 ಬೇಡಿಕೆಗಳಲ್ಲಿ 8 ಬೇಡಿಕೆಯನ್ನ ಈಡೇರಿಸಿದ್ದೇವೆ. ಈ 8 ಬೇಡಿಕೆಗಳಲ್ಲಿ ಯಾವುದಾದ್ರೂ ಕೊರತೆ ಇದ್ರೆ ಅದನ್ನ ಬಗೆಹರಿಸುತ್ತೇವೆ. ಸಾರಿಗೆ ಇಲಾಖೆ ಇರೋದು ಸಾರ್ವಜನಿಕರ ಸೇವೆಗೆ. ಆದ್ರೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರೋವಾಗ ಹೀಗೆ ಹಠ ಮಾಡಬಾರ್ದು. ಸರ್ಕಾರದ ಹಣಕಾಸಿನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಸಹಕರಿಸಿ. ಮುಷ್ಕರವನ್ನ ಕೊನೆಗೊಳಿಸಿ ಬಸ್ ಸಂಚಾರವನ್ನ ಆರಂಭಿಸಬೇಕು. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸು ಮಾಡೋಕೆ ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ ಅನ್ನೋದು ಗೊತ್ತಾದ ಮೇಲೂ ಹಠಕ್ಕೆ ಬಿದ್ದು, ಯಾರದ್ದೋ ಮಾತಿಗೆ ಬಲಿಯಾಗಿ ಮುಷ್ಕರ ಮುಂದುವರಿಸೋದು ಸರಿಯಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದ್ರು.
-masthmagaa.com
Contact Us for Advertisement