ಜನರ ಸಮಸ್ಯೆ ಅರ್ಥ ಮಾಡಿಕೊಂಡು ಮುಷ್ಕರವನ್ನ ಅಂತ್ಯಗೊಳಿಸಿ

masthmagaa.com:

ಈಗಿನ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವಿಲ್ಲ. ಇದನ್ನ ಅರ್ಥ ಮಾಡಿಕೊಂಡು ಸಾರಿಗೆ ನೌಕರರು ಮುಷ್ಕರನ್ನ ಅಂತ್ಯಗೊಳಿಸಿ ಬಸ್ ಸಂಚಾರ ಆರಂಭಿಸಬೇಕು ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
9 ಬೇಡಿಕೆಗಳಲ್ಲಿ 8 ಬೇಡಿಕೆಯನ್ನ ಈಡೇರಿಸಿದ್ದೇವೆ. ಈ 8 ಬೇಡಿಕೆಗಳಲ್ಲಿ ಯಾವುದಾದ್ರೂ ಕೊರತೆ ಇದ್ರೆ ಅದನ್ನ ಬಗೆಹರಿಸುತ್ತೇವೆ. ಸಾರಿಗೆ ಇಲಾಖೆ ಇರೋದು ಸಾರ್ವಜನಿಕರ ಸೇವೆಗೆ. ಆದ್ರೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರೋವಾಗ ಹೀಗೆ ಹಠ ಮಾಡಬಾರ್ದು. ಸರ್ಕಾರದ ಹಣಕಾಸಿನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಸಹಕರಿಸಿ. ಮುಷ್ಕರವನ್ನ ಕೊನೆಗೊಳಿಸಿ ಬಸ್​ ಸಂಚಾರವನ್ನ ಆರಂಭಿಸಬೇಕು. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸು ಮಾಡೋಕೆ ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ ಅನ್ನೋದು ಗೊತ್ತಾದ ಮೇಲೂ ಹಠಕ್ಕೆ ಬಿದ್ದು, ಯಾರದ್ದೋ ಮಾತಿಗೆ ಬಲಿಯಾಗಿ ಮುಷ್ಕರ ಮುಂದುವರಿಸೋದು ಸರಿಯಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದ್ರು.

-masthmagaa.com

Contact Us for Advertisement

Leave a Reply