ಬದಾಮಿಗೆ ಬೈ ಬೈ, ಕೊಪ್ಪಳದ ಕುಷ್ಟಗಿ ಇಂದ ಸಿದ್ದರಾಮಯ್ಯ ಸ್ಪರ್ಧೆ?

masthmagaa.com:

ಇತ್ತೀಚೆಗೆ ತಾನೆ ಇದು ತಮ್ಮ ಕೊನೆ ಚುನಾವಣೆ ಅಂತ ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ ಅಂದಿದ್ರು. ಇದೀಗ ಬದಾಮಿಗೂ ಬಾಯ್‌ ಬಾಯ್‌ ಹೇಳ್ತಾ ಇದ್ದಾರೆ ಅಂತ ಹೇಳಲಾಗ್ತಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವ್ರನ್ನ ಕೊಪ್ಪಳದಲ್ಲಿ ಕಣಕ್ಕಿಳಿಸೋಕೆ ನೋಡಲಾಗ್ತಿದೆ. ಸುಮಾರು 50 ಜನರ ತಂಡ ಕೋಲಾರದಲ್ಲಿ ಸರ್ವೇ ನಡೆಸಿದೆ, ಬಹುಶಃ ಕುಷ್ಟಗಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಬಹುದು ಅಂತ ಹೇಳಲಾಗಿದೆ. ಇನ್ನು ಈ ಹಿಂದೆ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ್‌, ಸಿದ್ದರಾಮಯ್ಯ ಅವ್ರು ಸ್ಪರ್ಧಿಸೊದಾದ್ರೆ ತಾನು ಕ್ಷೇತ್ರ ಬಿಟ್ಟುಕೊಡಲು ಸಿದ್ದ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply