ಜ.13 ಅಥವಾ 14ಕ್ಕೆ ಸಂಪುಟ ವಿಸ್ತರಣೆ.. ಯೋಗೇಶ್ವರ್​ ಸೇರಿ 7 ಜನರಿಗೆ ಮಂತ್ರಿಗಿರಿ

masthmagaa.com:

ನಿನ್ನೆಯಷ್ಟೇ ದೆಹಲಿಗೆ ಹೋಗಿ ಅಮಿತ್ ಶಾ, ಜೆ.ಪಿ. ನಡ್ಡಾ ಮತ್ತು ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸಿ ಬಂದಿದ್ದ ಸಿಎಂ ಯಡಿಯೂರಪ್ಪ ಇವತ್ತು ಮಾತನಾಡಿ, ಜನವರಿ 13 ಅಥವಾ 14ರಂದು ಸಚಿವ ಸಂಪುಟ ವಿಸ್ತರಣೆ ಆಗಲಿದೆ ಅಂತ ಹೇಳಿದ್ದಾರೆ. ಸಂಪುಟಕ್ಕೆ 7 ಜನರನ್ನ ಸೇರಿಸಿಕೊಳ್ಳಲಾಗುವುದು ಅಂತಾನೂ ಹೇಳಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿರೋದ್ರ ಜೊತೆಗೆ ಎಷ್ಟು ಜನರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತೆ ಅನ್ನೋ ಗುಟ್ಟನ್ನ ಸಿಎಂ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಜನವರಿ 13 ಅಂತ ಹೇಳಿದ್ರು. ಆದ್ರೆ ಅಂದು ಅಮಾವಾಸ್ಯೆ ಇರೋದ್ರಿಂದ 14ಕ್ಕೆ ಸಂಪುಟ ವಿಸ್ತರಣೆಯಾಗಬಹುದು ಅಂತ ಹೇಳಲಾಗ್ತಿದೆ. ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್​ಗೆ ಸಚಿವ ಸ್ಥಾನ ಪಕ್ಕಾ ಅಂತ ಈ ಹಿಂದೆಯೇ ಯಡಿಯೂರಪ್ಪ ಹೇಳಿದ್ರು. ಸೋ ಅವರಿಗೆ ಮಂತ್ರಿಗಿರಿ ಸಿಗಲಿದೆ. ಉಳಿದ 6 ಮಂದಿ ಯಾರು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಮಂತ್ರಿಗಿರಿ ರೇಸ್​​ನಲ್ಲಿ ಮುನಿರತ್ನ, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್, ಆರ್​. ಶಂಕರ್, ಎನ್​. ಮಹೇಶ್​ ಮುಂತಾದವರು ಇದ್ದಾರೆ.

-masthmagaa.com

Contact Us for Advertisement

Leave a Reply