ರಾಜ್ಯದಲ್ಲಿ ಶಾಂತವಾದ ವರುಣ? ಎಲ್ಲೆಲ್ಲಿ ಮಳೆಯಾಗಿದೆ ನೋಡಿ!

masthmagaa.com:

ಕಳೆದ ಎರಡು ಮೂರು ವಾರಗಳಿಂದ ಅಬ್ಬರದಿಂದ ಸುರೀತಿದ್ದ ಮಳೆ ಈಗ ಶಾಂತವಾದ ರೀತಿ ಕಾಣಿಸ್ತಿದೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಶಿರ್ತಾಡಿ ಎಂಬಲ್ಲಿ ಅತಿಹೆಚ್ಚು 71ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಕೆಲವೊಂದು ಭಾಗಗಳಲ್ಲಿ ಅಧಿಕ ಮಳೆ ಇನ್ನುಳಿದ ಕಡೆ ಸಾಧರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಕೆಲವು ಕಡೆ ಸಾಧರಣ, ಉಳಿದೆಡೆ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ಯಾವ ಅಲರ್ಟ್‌ನ್ನೂ ಜಾರಿ ಮಾಡಲಾಗಿಲ್ಲ.

-masthmagaa.com

Contact Us for Advertisement

Leave a Reply