‘ಮನ್ ಕಿ ಬಾತ್’ ಪುಸ್ತಕ ಪ್ರಕಟಿಸುವುದಾಗಿ ಹೇಳಿ ಹಣ ಸಂಗ್ರಹಿಸಿದ ಪತ್ರಕರ್ತ! ದೂರು ದಾಖಲು!

masthmagaa.com:

ಮುಂಬೈನ ಸ್ಥಳೀಯ ಪತ್ರಿಕೆಯ ಸಂಪಾದಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವ್ರ ‘ಮನ್ ಕಿ ಬಾತ್’ ರೇಡಿಯೋ ಭಾಷಣಗಳನ್ನ ಸೇರಿಸಿ ಪುಸ್ತಕ ಪ್ರಕಟಿಸೋದಾಗಿ ಹೇಳಿ, ಹಣ ಸಂಗ್ರಹಿಸಿ ಜನರನ್ನ ವಂಚಿಸಿರೋ ಘಟನೆ ನಡೆದಿದೆ. ಅಲೋಕ್‌ ತಿವಾರಿ ಅನ್ನೋ ಈ ವ್ಯಕ್ತಿ ಮೋದಿ ಭಾಷಣ ಇರೋ ಸಾರ್‌ ಗ್ರಂಥ್‌ ಅನ್ನೊ ಪುಸ್ತಕವನ್ನ 2023ರಲ್ಲಿ ಪ್ರಕಟಿಸೋದಾಗಿ ಹಾಗೂ ಅದನ್ನ ರಾಷ್ಟ್ರಪತಿ ಬಿಡುಗಡೆ ಮಾಡ್ತಾರೆ ಅಂತ ಜನರಿಗೆ ಸುಳ್ಳು ಹೇಳಿದ್ದ. ಜೊತೆಗೆ ಈತ ದೊಡ್ಡ ಉದ್ಯಮಿಗಳು ಮತ್ತು ಇತರರಿಂದ ಹಣ ಕೇಳುತಿದ್ದ ಅಂತ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಕೇಸ್‌ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply