masthmagaa.com:
ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಓರ್ವ ಪಾಕ್ ಮೂಲದ ಉಗ್ರನನ್ನು ಹೊಡೆದುರುಳಿಸಲಾಗಿದೆ. ಜುಲೈ 23-24ರಂದು ನಡೆದ ಕಾರ್ಯಾಚರಣೆಯಲ್ಲಿ ಓರ್ವ ಪಾಕ್ ಉಗ್ರ ಸೇರಿ ಮೂವರನ್ನು ಹೊಡೆದುರುಳಿಸಲಾಗಿತ್ತು. ಆದ್ರೆ ಈ ವೇಳೆ ಒಬ್ಬ ತಪ್ಪಿಸಿಕೊಂಡು ಹೋಗಿದ್ದ. ನಿನ್ನೆ ಛಂದಾಜಿ ಎಂಬ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೊಡೆದುರುಳಿಸಲಾಗಿದೆ. ಈತ ಪಾಕಿಸ್ತಾನದ ಪಂಜಾಬ್ ಮೂಲದ ಉಗ್ರ ಬಾಬರ್ ಅಲಿ ಅಂತ ಗೊತ್ತಾಗಿದೆ. ಈ ನಡುವೆ ಜಮ್ಮು ಕಾಶ್ಮೀರ ಪೊಲೀಸರು ಟಾಪ್ಟೆನ್ ಉಗ್ರರ ಹಿಟ್ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಇನ್ನು ಗುಜರಾತ್ನ ಕಛ್ ಜಿಲ್ಲೆಯ ಖಾವ್ಡಾ ಅನ್ನೋ ಪಾಕ್ ಗಡಿ ದಾಟಿಕೊಂಡು 15 ವರ್ಷದ ಬಾಲಕನೊಬ್ಬ ಭಾರತಕ್ಕೆ ಬಂದಿದ್ದಾನೆ. ಸದ್ಯ ಬಿಎಸ್ಎಫ್ ಯೋಧರು ಆತನನ್ನು ವಶಕ್ಕೆ ಪಡೆದಿದ್ಧಾರೆ. ಅತ್ತ ತ್ರಿಪುರಾದಲ್ಲಿ ಭಾರತ-ಬಾಂಗ್ಲಾದೇಶದ ಗಡಿಭಾಗದಲ್ಲಿ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾದ ದಾಳಿಗೆ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಕಥುವಾದ ರಂಜಿತ್ ಸಾಗರ್ ಡ್ಯಾಮ್ನಲ್ಲಿ ಧ್ರುವ ಹೆಲಿಕಾಪ್ಟರ್ ಪತನಗೊಂಡಿದ್ದು, ಶೋಧಕಾರ್ಯ ನಡೀತಾ ಇದೆ. ಅದ್ರಲ್ಲಿದ್ದ ಇಬ್ಬರೂ ಪೈಲಟ್ಗಳು ಸೇಫ್ ಆಗಿದ್ದಾರೆ ಅಂತ ಸೇನೆ ಮಾಹಿತಿ ಕೊಟ್ಟಿದೆ.
-masthmagaa.com
Contact Us for Advertisement