masthmagaa.com:
ಚೀನಾ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ತರಾಟೆ ತಗೊಂಡಿದ್ರು, ಇದ್ರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮೇ 2020 ರಿಂದ, ಲಡಾಖ್ನಲ್ಲಿ ಚೀನಾದ ಆಕ್ರಮಣವನ್ನು ಎದುರಿಸೋಕೆ ಕೇಂದ್ರ ಸರ್ಕಾರದ ಕಾರ್ಯತಂತ್ರವನ್ನು DDLJ ಅಂತ ಕರಿಬೋದು ಅಂತ ಹೇಳಿದ್ದಾರೆ. ಡಿ ಅಂದ್ರೆ – Deny ಅಂದ್ರೆ, Distract ಅಂದ್ರೆ ವಿಚಲಿತಗೊಳಿಸು, Lie(ಸುಳ್ಳು), Justify(ಸಮರ್ಥನೆ) ಅಂತ ಕರಿಬೋದು ಅಂತ ಹೇಳಿದ್ದಾರೆ. ಜೈಶಂಕರ್ ಅವ್ರು ಚೀನಾದ ವಿರುದ್ದ ತಮ್ಮ ಸರ್ಕಾರದ ವಿಫಲ ನೀತಿಯಿಂದ ಗಮನವನ್ನ ಬೇರೆ ಕಡೆ ಸೆಳೆಯೋಕೆ ಈ ರೀತಿ ಹೇಳಿಕೆ ಕೊಡ್ತಾರೆ ಅಂತ ರಮೇಶ್ ಆರೋಪಿಸಿದ್ದಾರೆ.
-masthmagaa.com
Contact Us for Advertisement