masthmagaa.com:
ಚೈತ್ರಾ ವಾಸುದೇವನ್ ಅವರು ಆಂಕರ್ ಆಗಿ, ಬಿಗ್ಬಾಸ್ 7ರ ಸ್ಪರ್ಧಿ ಆಗಿ ಮತ್ತು ಬಿಸನೆಸ್ ವುಮೆನ್ ಆಗಿ ಮಿಂಚಿದವರು. ಚೈತ್ರ ವಾಸುದೇವನ್ ಅವರ ಡಿವೋರ್ಸ್ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಯಾಕಂದ್ರೆ ಚೈತ್ರ ವಾಸುದೇವನ್ ಆಗಲಿ ಅಥ್ವಾ ಅವರ ಪತಿ ಸತ್ಯ ನಾಯ್ಡು ಆಗಲಿ ಯಾವತ್ತು ಸಾಮಾಜಿಕವಾಗಿ ದೂರಿಕೊಂಡವರಲ್ಲ. ಸಿಂಪಲ್ ಆಗಿ ಮನೆಯವರ ಮುಂದೆ ಮದುವೆ ಆದ ಇವರು ಈಗ ಬೇರೆ ಬೇರೆಯಾಗಿದ್ದಾರೆ. ಈ ವಿಷಯವನ್ನ ಸ್ವತಃ ಚೈತ್ರಾ ವಾಸುದೇವನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
“ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ” ಅಂತ ಚೈತ್ರ ವಾಸುದೇವನ್ ಬರೆದುಕೊಂಡಿದ್ದಾರೆ.
ಚೈತ್ರ ವಾಸುದೇವನ್ ಅವರು ಆಂಕರ್ ಮಾತ್ರವಲ್ಲದೇ ಇವೆಂಟ್ ಮ್ಯಾನೇಜ್ಮೆಂಟ್ ಮಾಡೋ ಮೂಲಕ ಬಿಸನೆಸ್ ವುಮೆನ್ ಕೂಡ ಆಗಿದ್ರು. ಹಲವಾರು ಸೆಲೆಬ್ರಿಟಿಗಳ ಮದುವೆ, ಇನ್ನಿತರ ಫಂಕ್ಷನ್ಗಳಿಗೂ ಸಹ ಇವರು ಇವೆಂಟ್ ಪ್ಲಾನರ್ ಆಗಿದ್ರು.
-masthmagaa.com
Contact Us for Advertisement