masthmagaa.com:
ಸಮಾಜದಲ್ಲಿ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಪಟ್ಟಿ ದೊಡ್ಡದಿದೆ. ಈ ರೀತಿ ಸಾಧನೆ ಮಾಡಿದವರ ಹಿಂದೆ ಸಾಕಷ್ಟು ಶ್ರಮ ಇದೆ. ಸಾಧಕರ ಕಷ್ಟ, ಕಣ್ಣೀರು, ಹಸಿವು ಎಲ್ಲರಿಗೂ ಕಾಣುವುದಿಲ್ಲ. ಇದನ್ನು ಜನರ ಮುಂದಿಡುವ ಕೆಲಸ ‘ವೀಕೆಂಡ್ ವಿತ್ ರಮೇಶ್’ ಶೋನಿಂದ ಆಗುತ್ತಿದೆ. ರಮೇಶ್ ಅರವಿಂದ ಅವರ ಅದ್ಭುತ ನಿರೂಪಣೆ ಈ ಶೋನ ಸೌಂದರ್ಯ ಹೆಚ್ಚಿಸಿದೆ. ಕನ್ನಡಿಗರ ಮನೆ-ಮನವನ್ನ ತಲುಪಿರುವ ‘ವೀಕೆಂಡ್ ವಿತ್ ರಮೇಶ್‘ ಕಾರ್ಯಕ್ರಮ ಮತ್ತೆ ಪುನರಾರಂಭ ಆಗ್ತಾ ಇದೆ ಅನ್ನೋ ಸುದ್ದಿ ಹರಡಿದ್ದ ಬೆನ್ನಲ್ಲೇ, ಮೊದಲ ಎಪಿಸೋಡ್ನಲ್ಲಿ ಪ್ರಭುದೇವ ಅವರು ಬರ್ತಾರೆ ರಿಷಬ್ ಶೆಟ್ಟಿ ಬರ್ತಾರೆ, ರಮ್ಯ ಅವರು ಬರ್ತಾರೆ ಅನ್ನೊ ಗಾಳಿ ಸುದ್ದಿ ಇತ್ತು, ಆದರೆ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ಕನ್ನಡ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಶೋ ಬಗ್ಗೆ ನಿನ್ನೆ ಮಾತನಾಡಿದ್ದಾರೆ ಅಲ್ಲದೇ ಮೊದಲ ಅತಿಥಿ ಯಾರು ಹಾಗೂ ಯಾರೆಲ್ಲ ಸಾಧಕರು ಈ ಸೀಸನ್ 5ನಲ್ಲಿ ಅತಿಥಿಯಾಗಿ ಬರ್ತಾರೆ ಅನ್ನೊ ಮಾಹಿತಿಯನ್ನ ಅಧಿಕೃತವಾಗಿ ಹೊರಹಾಕಿದ್ದಾರೆ.
ರಮೇಶ್ ಅರವಿಂದ್ ಅವರನ್ನ ಓಳಗೊಂಡಿರುವ ಪ್ರೋಮೊ ಗಳು ಈಗಾಗಲೇ ಬಿಡುಗಡೆ ಆಗಿದ್ದು, ‘ವೀಕೆಂಡ್ ವಿತ್ ರಮೇಶ್‘ ಸೀಸನ್ 5ರ ಮೊದಲ ಸಂಚಿಕೆ ಮಾರ್ಚ್ 25 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸೀಸನ್ 5ರ ಮೊದಲ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಬರ್ತಾರೆ ಅಂತ ಕರ್ನ್ಫರ್ಮ್ ಆಗಿದೆ. ಅಲ್ಲದೇ ಮುಂದಿನ ಎಪಿಸೋಡ್ಗಳಲ್ಲಿ ಯಾರ್ ಯಾರು ಗೆಸ್ಟ್ ಆಗಿ ಬರ್ತಾರೆ ಅನ್ನೋ ಮಾಹಿತಿ ಕೂಡ ಹೊರಬಿದ್ದಿದೆ. ” ಪ್ರಭುದೇವ ಅವರ ಶೂಟಿಂಗ್ ಆಲ್ರೆಡಿ ಮುಗ್ದಿದೆ, ರಮ್ಯ ಅವರ ಶೂಟಿಂಗ್ ಬಾಕಿ ಇದೆ. ಈ ಸೀಸನ್ನ್ನ ಮೊದಲನೇ ಎಪಿಸೋಡ್ನ ಅತಿಥಿ ರಮ್ಯ ಆಗಿರ್ತಾರೆ. ಇದು ಬಿಟ್ಟರೆ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಸದ್ಗುರು ಅಂತಾನೇ ಫೇಮಸ್ ಆಗಿರುವ ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್, ಸದ್ಯ ಎಲೆಕ್ಷನ್ ಇರೋದ್ರಿಂದ ಎಲೆಕ್ಷನ್ ಮುಗಿದ ಮೇಲೆ ರಾಜಕಾರಣಿಗಳು, ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ” ಎಂದು ರಾಘವೇಂದ್ರ ಹುಣಸೂರುವರು ಹೇಳಿದ್ದಾರೆ.
ಕಾರ್ಯಕ್ರಮ ನಿರೂಪಕ ರಮೇಶ್ ಅರವಿಂದ್ ಅವರು ಮಾತನಾಡಿ “ಇನ್ನು 16 ಸಾಧಕರು ಅದ ಬಳಿಕ ಸೆಂಚೂರಿ ಭಾರಿಸುತ್ತೇವೆ. ಸಿನಿಮಾದಲ್ಲಿಯೂ ಸೆಂಚುರಿ ಹೊಡೆದಿದ್ದೇನೆ. ಈಗ ಇದರಲ್ಲೂ ಹೊಡೆದರೆ ಖುಷಿ ಆಗುತ್ತದೆ. ಇದನ್ನೆಲ್ಲ ನೋಡಿದಾಗ ನನಗೆ ಅನಿಸುತ್ತಿರುವುದು, ಎಲ್ಲಾ ಸೇಮ್, ಎಲ್ಲಾ ಸಾಧಕರು ಸಾಧನೆಗೆ ಹೋರಾಟವನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಸಾಧಕರಿಗೆ ಕೊರತೆ ಇಲ್ಲ. ಸ್ಪೂರ್ತಿ ತುಂಬುವಂತಹ ಕೆಲಸ ಮಾಡಬೇಕು. ಅದರಿಂದ, ಕರ್ನಾಟಕದಲ್ಲಿರೋ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಿಸಬೇಕು ಅನ್ನೋದೆ “ವೀಕೆಂಡ್ ವಿತ್ ರಮೇಶ್” ಉದ್ದೇಶ” ಎಂದು ಹೇಳಿದರು.
ಇನ್ನು 16 ಅತಿಥಿಗಳು ಕಳೆದರೆ 100 ನೇ ಅತಿಥಿಯತ್ತ ‘ವೀಕೆಂಡ್ ವಿತ್ ರಮೇಶ್‘ ಕಾಲಿಡತ್ತೆ. 100 ನೇ ಅತಿಥಿ ಅಂದ್ರೆ ಸಾಮಾನ್ಯವಾಗಿ ಸ್ಪೆಷಲ್ ಆಗೇ ಇರತ್ತೆ. 100 ನೇ ಅತಿಥಿ ಬಗ್ಗೆಯೂ ಮಾತನಾಡಿದ ರಮೇಶ್ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಅತಿಥಿಯಾಗಿ ಬರುವವರು, ಆ ಚೇರ್ಗೆ ನ್ಯಾಯ ಕೊಡಲಿದ್ದಾರೆ ಎಂದು ಹೇಳಿದರು. ಇಲ್ಲಿಯ ತನಕ ಒಟ್ಟು 84 ಸಾಧಕರನ್ನ ಕರೆದು ಅವರ ಕಷ್ಟದ ಹಾದಿಯ ಬಗ್ಗೆ, ಮತ್ತು ಸಾಧನೆಯ ಬಗ್ಗೆ ತಿಳಿಸಿಕೊಡುವಂತಹ ಪ್ರಯತ್ನ ‘ವೀಕೆಂಡ್ ವಿತ್ ರಮೇಶ್‘ ಕಾರ್ಯಕ್ರಮದ ಮೂಲಕ ಆಗಿದೆ. ಇದೀಗ ಇದೇ ಮಾರ್ಚ್ 25ರಿಂದ ವಿಕೆಂಡ್ ವಿತ್ ರಮೇಶ್ ಸೀಸನ್ 5 ಪ್ರತಿ ಶನಿವಾರ-ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
-masthmagaa.com
Contact Us for Advertisement