masthmagaa.com:
ರಾಜ್ಯ ರಾಜಕೀಯದಲ್ಲೀಗ ಮಾಂಸದಂಗಲ್ ಶುರುವಾಗಿದೆ. ಮೊನ್ನೆ ಮೊಟ್ಟೆ, ನಿನ್ನೆ ಕೋಳಿ ಇಂದು ನಾಟಿ ಕೋಳಿ ವಿವಾದ ಎದ್ದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಂಸಾಹಾರ ಸೇವನೆಗೆ ಸಂಬಂಧಪಟ್ಟಂತೆ ಮಗದೊಂದು ವಿವಾದಕ್ಕೆ ಸಿಲುಕಿದ್ದಾರೆ. 2017ರ ದಸರಾ ಹಬ್ಬದ ಸಂಧರ್ಭದಲ್ಲಿ ಸಿದ್ದರಾಮಯ್ಯ ಮಾಂಸಹಾರ ಸೇವನೆ ಮಾಡಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಫಾರ್ಚನೆ ಮಾಡಿದ್ರು ಅಂತ ಆರೋಪಿಸಲಾಗಿದೆ. ಈ ಬಗ್ಗೆ ಮಾತನಾಡಿರೋ ಸಂಸದ ಪ್ರತಾಪ್ ಸಿಂಹ ನಾಟಿ ಕೋಳಿ ತಿಂದು ಪುಷ್ಪಾರ್ಚನೆ ಮಾಡಿರೋದಕ್ಕೆ ನಾನೇ ಸಾಕ್ಷಿ. ಈ ಕಾರಣದಿಂದ ಅವರಿಗೆ ಮುಂದಿನ ದಸರಾದಲ್ಲಿ ಪುಷ್ಪಾರ್ಚನೆ ಮಾಡೋಕೆ ಚಾಮುಂಡೇಶ್ವರಿ ಕರುಣೆ ಕೊಡ್ಲಿಲ್ಲ ಅಂತ ಹೇಳಿದ್ರು. ಅಲ್ದೇ ನೀವ್ ತಾನೇ ಇದನ್ನ ತಿನ್ಬೇಡಿ ಅದನ್ನ ತಿನ್ಬೇಡಿ ಅಂತ ದೇವರು ಹೇಳ್ತಾನಾ ಅಂತ ಹೇಳಿದ್ದು,ವೈಸ್ ಕ್ಯಾಪ್ಟನ್ ಜಮೀರ್ ಮತ್ತು ಬೆಂಬಲಿಗರಿಗೆ ಹಂದಿ ಮಾಂಸ ತಿನ್ನೋಕೆ ಹೇಳಿದ್ರೆ ಅವರು ತಿಂತಾರಾ? ಅಂತ ತಿರುಗುಬಾಣ ಬಿಟ್ಟಿದ್ದಾರೆ. ಇನ್ನು ಈ ಮಾಂಸ ಸೇವನೆ ಬಗ್ಗೆ ಮಾತನಾಡಿದ ಮೈಸೂರು ಮಾಜಿ ಮೇಯರ್ ರವಿಕುಮಾರ್ ಪ್ರತಿಕ್ರಿಯಿಸಿ ಪುಷ್ಪಾರ್ಚನೆ ಮಾಡೋದಿನ ಅಂದಿನ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಿದ್ರು. ಲಲಿತ್ ಮಹಲ್ ಹೋಟೆಲ್ನಲ್ಲಿ ಮಾಂಸಹಾರ – ಸಸ್ಯಹಾರದ ಊಟದ ವ್ಯವಸ್ಥೆ ಇತ್ತು. ಸಿದ್ದರಾಮಯ್ಯ ಅವರು ನಾಟಿ ಕೋಳಿ ಊಟ ಮಾಡಿದ್ದರು ಅಂತ ಹೇಳಿದ್ರು.
-masthmagaa.com
Contact Us for Advertisement