masthmagaa.com:
ಡೇರ್ ಡೆವಿಲ್ ಮುಸ್ತಫ ಸಿನಿಮಾ ರಿಲೀಸ್ ಆದಾಗಿಂದ ಸೌಂಡ್ ಮಾಡ್ತಾ ಇದೆ. ಈಗ ತೆರಿಗೆ ಇಲ್ಲದೇನೆ ಈ ಸಿನಿಮಾ ನೋಡೋ ಅವಕಾಶ ಜನರಿಗೆ ಸಿಕ್ಕಿದೆ. ಪೂರ್ಣಚಂದ್ರ ತೇಜಸ್ವಿ ಅವರ ಕತೆ ಆಧಾರಿತ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ.
ಹೊಸಬರ ಪ್ರಯತ್ನದಿಂದ ರೆಡಿಯಾದ ಈ ಚಿತ್ರಕ್ಕೆ ಎಲ್ಲಡೆ ಮೆಚ್ಚಿಗೆ ವ್ಯಕ್ತವಾಗಿತ್ತು. ಅನೇಕ ಸೆಲೆಬ್ರೆಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಶಶಾಂಕ್ ಸೋಗಲ್, ಚಿತ್ರಕತೆ ಬರೆದಿರುವ ಚಿಂತನ್ ಹಾಗೂ ಚಿಂತಕ ನಟರಾಜ್ ಹುಳಿಯಾರ್ ಅವರು ಸಿಎಂ ನಿವಾಸಕ್ಕೆ ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಡೇರ್ಡೆವಿಲ್ ಮುಸ್ತಾಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ರು. ಅದರ ಪರಿಣಾಮವಾಗಿ ಈಗ ಡೇರ್ ಡೆವಿಲ್ ಮುಸ್ತಫ ಸಿನಿಮಾಗೆ ತೆರಿಗೆ ವಿನಾಯಿತಿ ಸಿಕ್ಕಿದೆ.
-masthmagaa.com
Contact Us for Advertisement