ಡೇರ್‌ ಡೆವಿಲ್‌ ಮುಸ್ತಫನಿಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ!

masthmagaa.com:

ಡೇರ್‌ ಡೆವಿಲ್‌ ಮುಸ್ತಫ ಸಿನಿಮಾ ರಿಲೀಸ್‌ ಆದಾಗಿಂದ ಸೌಂಡ್‌ ಮಾಡ್ತಾ ಇದೆ. ಈಗ ತೆರಿಗೆ ಇಲ್ಲದೇನೆ ಈ ಸಿನಿಮಾ ನೋಡೋ ಅವಕಾಶ ಜನರಿಗೆ ಸಿಕ್ಕಿದೆ. ಪೂರ್ಣಚಂದ್ರ ತೇಜಸ್ವಿ ಅವರ ಕತೆ ಆಧಾರಿತ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ.

ಹೊಸಬರ ಪ್ರಯತ್ನದಿಂದ ರೆಡಿಯಾದ ಈ ಚಿತ್ರಕ್ಕೆ ಎಲ್ಲಡೆ ಮೆಚ್ಚಿಗೆ ವ್ಯಕ್ತವಾಗಿತ್ತು. ಅನೇಕ ಸೆಲೆಬ್ರೆಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಶಶಾಂಕ್‌ ಸೋಗಲ್‌, ಚಿತ್ರಕತೆ ಬರೆದಿರುವ ಚಿಂತನ್ ಹಾಗೂ ಚಿಂತಕ ನಟರಾಜ್ ಹುಳಿಯಾರ್ ಅವರು ಸಿಎಂ ನಿವಾಸಕ್ಕೆ ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ರು. ಅದರ ಪರಿಣಾಮವಾಗಿ ಈಗ ಡೇರ್‌ ಡೆವಿಲ್‌ ಮುಸ್ತಫ ಸಿನಿಮಾಗೆ ತೆರಿಗೆ ವಿನಾಯಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply