ಸಲಿಂಗ ವಿವಾಹ ಪ್ರಕರಣದ ತೀರ್ಪು ನನ್ನ ಆತ್ಮಸಾಕ್ಷಿಯ ಪ್ರತಿಫಲನ: CJI ಡಿ. ವೈ. ಚಂದ್ರಚೂಡ್

masthmagaa.com:

ಅಮೆರಿಕದ ವಾಷಿಂಗ್‌ಟನ್‌ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ. ವೈ. ಚಂದ್ರಚೂಡ್‌ ಭಾಗವಹಿಸಿದ್ದಾರೆ. ಈ ವೇಳೆ ಕಳೆದ ವಾರ‌ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಕೆಲವೊಮ್ಮೆ ತೀರ್ಪು ನೀಡುವಲ್ಲಿ ಆತ್ಮಸಾಕ್ಷಿಯ ರೋಲ್‌ ಕೂಡ ಇರುತ್ತೆ. ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ವೈಯಕ್ತಿಕ ಸಂಬಂಧ, ಬದುಕುವ, ಮಾತನಾಡುವ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಮುಂತಾದ ಮೂಲಭೂತ ಹಕ್ಕುಗಳನ್ನ ಪಡೆಯೋಕೆ ಯಾವುದೇ ತೊಂದರೆಯಿಲ್ಲ. ಆದ್ರೆ ಸುಪ್ರೀಂ ಕೋರ್ಟ್‌ ಮುಂದೆ ಇದ್ದ ಪ್ರಶ್ನೆ ಇವೆಲ್ಲವನ್ನ ಹೊರತುಪಡಿಸಿ ದತ್ತು, ಉತ್ತರಾಧಿಕಾರ, ಟ್ಯಾಕ್ಸ್‌ಗಳಂತಹ ಕಾಂಪ್ಲೆಕ್ಸ್‌ ವಿಚಾರಗಳ ಬಗ್ಗೆ ಆಗಿತ್ತು. ಹಾಗಾಗಿ ಇವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನ ಸರ್ಕಾರಕ್ಕೆ ಬಿಡಲಾಯಿತು” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply