ರಾಹುಲ್‌ ನ್ಯಾಯ ಯಾತ್ರೆಗೆ ಟಾಂಗ್‌ ಕೊಟ್ಟ ಕಾಂಗ್ರೆಸ್‌ ನಾಯಕ!

masthmagaa.com:

ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ್‌ ಯಾತ್ರಾಗೆ ವಿಪಕ್ಷಗಳಿಂದ ಟೀಕೆ ಕೇಳಿಬಂದಿರೋದು…ಓಕೇ..ಸರ್ವೇಸಾಮಾನ್ಯ ಅಂತೇಳ್ಬೋದು. ಆದ್ರೆ ಇದೀಗ ಖುದ್ದು ಕಾಂಗ್ರೆಸ್‌ ನಾಯಕರೇ ಒಬ್ರು ಕಾಂಗ್ರೆಸ್‌ನ ಈ ಯಾತ್ರೆ ಬಗ್ಗೆ ಟೀಕಿಸಿದ್ದಾರೆ. ಇದನ್ನ ʻಪಾಲಿಟಿಕಲ್‌ ಟೂರಿಸಂʼ ಅಥ್ವಾ ರಾಜಕೀಯ ಪ್ರವಾಸೋಧ್ಯಮ ಅಂತ ಕರೆದಿದ್ದಾರೆ. ಹೌದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಅವ್ರು ಜನವರಿ 29 ರಂದು ಈ ರೀತಿ ಹೇಳಿಕೆ ನೀಡಿದ್ದಾರೆ. ʻಕಾಂಗ್ರೆಸ್‌ ಪಕ್ಷದಲ್ಲಿ ಗ್ರೇಟ್‌ ಮತ್ತು ಬುದ್ಧಿವಂತ ನಾಯಕರಿದ್ದಾರೆ. ಒಂದ್ಕಡೆಯಿಂದ ಎಲ್ಲಾ ಪಾರ್ಟಿಗಳು 2024ರ ಚುನಾವಣೆಗೆ ರೆಡಿಯಾಗ್ತಿದ್ರೆ, ಇನ್ನೊಂದ್ಕಡೆ ಕಾಂಗ್ರೆಸ್‌ ಪಾರ್ಟಿ ಮಾತ್ರ ಟೂರ್‌ ಮಾಡ್ತಿದೆ. ಊರೂರು ಸುತ್ತೋದ್ರಲ್ಲಿ ಬ್ಯುಸಿಯಾಗ್ಬಿಟ್ಟಿದೆ. 2024ರ ಚುನಾವಣೆಯಲ್ಲಿ ಗೆಲ್ಲೋದು ಹೇಗಂತ ಇವ್ರು (ಕಾಂಗ್ರೆಸ್‌), 2024 ಮುಗಿದ್ಮೇಲೆ ಪ್ಲಾನ್‌ ಮಾಡ್ತಾರೆ. ನಾವು 2029ರ ಲೋಕಸಭಾ ಚುನಾವಣೆಗೆ ರೆಡಿಯಾಗ್ತಿದ್ದೀವೇನೋ ಅಂತ ನನಗೆ ಅನ್ಸುತ್ತೆʼ ಅಂತ ರಾಹುಲ್‌ ಗಾಂಧಿಯವ್ರಿಗೆ ಟಾಂಟ್‌ ಕೊಟ್ಟಿದ್ದಾರೆ. ಇತ್ತ ಪಶ್ಚಿಮ ಬಂಗಾಳಕ್ಕೆ ಎಂಟ್ರಿ ಕೊಟ್ಟ ಭಾರತ್‌ ಜೋಡೋ ನ್ಯಾಯ್‌ ಯಾತ್ರಾ, ಎರಡು ದಿನಗಳ ಬ್ರೇಕ್‌ ನಂತ್ರ ಮತ್ತೆ ಪುನರಾರಂಭವಾಗಿದೆ.

-masthmagaa.com

Contact Us for Advertisement

Leave a Reply