masthmagaa.com:
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿರುವಾಗಲೇ ಕಾಂಗ್ರೆಸ್ ಪಕ್ಷದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನ ಕಾಂಗ್ರೆಸ್ ಪಕ್ಷ ವಿರೋಧಿಸಬೇಕಿದೆ. ಈ ಮಸೂದೆ ಜಾರಿಗೆ ಬಂದ್ರೆ ತಮ್ಮ ಜೀವನಕ್ಕಾಗಿ ಗೋಮಾಂಸವನ್ನೇ ಅವಲಂಬಿಸಿರುವ ಅದೆಷ್ಟೋ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆರ್ಎಸ್ಎಸ್ ಸಿದ್ಧಪಡಿಸಿದ ಯಾವುದೇ ಮಸೂದೆಯನ್ನಾದ್ರೂ ಜಾರಿಗೆ ತರೋದೇ ಬಿಜೆಪಿಯವರ ಕೆಲಸ’ ಅಂತ ಕಿಡಿಕಾರಿದ್ದಾರೆ. ಇದಕ್ಕೂ ಮೊದಲು ಮುಸ್ಲಿಂ ಸಮುದಾಯದ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಪ್ರಸ್ತಾವಿತ ಮಸೂದೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಅಲ್ಲದೆ ಈ ಮಸೂದೆ ವಿರುದ್ಧ ಹೋರಾಟ ಮಾಡುವಂತೆ ಆಗ್ರಹಿಸಿದ್ರು. ಇದರ ಬೆನ್ನಲ್ಲೇ ಮಾಜಿ ಸಿಎಂ ಈ ಹೇಳಿಕೆ ಕೊಟ್ಟಿದ್ದಾರೆ.
Congress has to oppose the anti cow slaughter bill here. All the people who depend on beef for their living will lose their jobs. They will introduce whatever bill has been prepared by the RSS: Siddaramaiah, Leader of Opposition, Karnataka Legislative Assembly pic.twitter.com/720HgrLskY
— ANI (@ANI) December 1, 2020
-masthmagaa.com
Contact Us for Advertisement