ಸಿದ್ದರಾಮಯ್ಯ ಕುಡಿದಾಗ ಒಂಥರಾ ಮಾತಾಡ್ತಾರೆ: ಈಶ್ವರಪ್ಪ

masthmagaa.com:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಓರ್ವ ಭಯೋತ್ಪಾದಕ ಅಂತ ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಇವತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ರಾಮಯ್ಯ ಯಾವಾಗ ಕುಡೀತಾರೋ ಗೊತ್ತಿಲ್ಲ. ಹೆಂಡ ಕುಡಿದಾಗ ಕಟೀಲ್​ರನ್ನ ಉಗ್ರಗಾಮಿ ಅಂತಾರೆ. ಹೆಂಡ ಕುಡೀದೇ ಇದ್ದಾಗ ಬೇರೆಥರ ಮಾತಾಡ್ತಾರೆ. ಸಿದ್ರಾಮಯ್ಯ ಓರ್ವ ಮೋಸಗಾರ. ಅವರ ರಕ್ತರ ಕಣ ಕಣದಲ್ಲೂ ಮೋಸ ಇದೆ. ಇಂಥವರು ರಾಷ್ಟ್ರಭಕ್ತರಾಗಿರೋ ಕಟೀಲ್​ ಬಗ್ಗೆ ಹೀಗೆ ಮಾತಾಡ್ದೆ ಇನ್ನೇನು ಮಾಡ್ತಾರೆ. ಇವರು ಜಮೀರ್ ಅಹ್ಮದ್​ರಂಥವರನ್ನ ಬೆಳೆಸ್ತಾರೆ, ಕಟೀಲ್​ರನ್ನ ಉಗ್ರಗಾಮಿ ಅಂತ ಕರೀತಾರೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply