masthmagaa.com:
ಪಂಚರಾಜ್ಯ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸಕಲ ಸಿದ್ಧತೆಗಳನ್ನ ಮಾಡ್ಕೋಳೋಕೆ ಶುರು ಮಾಡಿದೆ. ಇದೀಗ ತನ್ನ ಮೊದಲ ಅಸ್ತ್ರವಾಗಿ ಪ್ರಣಾಳಿಕೆಯೊಂದನ್ನ ಬಿಡುಗಡೆ ಮಾಡಿದೆ. MP ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಕರ್ನಾಟಕದ ಕಾಂಗ್ರೆಸ್ ಗೆಲುವಿನಿಂದ, ಫ್ರೀ ಯೋಜನೆಗಳಿಂದ ಫುಲ್ ಇನ್ಸ್ಪೈರ್ ಆಗಿದಾರೆ ಅನ್ಸತ್ತೆ. ಮಹಿಳೆಯರಿಗೆ ಉಚಿತ ಬಸ್, 1,500 ರೂ. ತಿಂಗಳ ಸ್ಟಿಪೆಂಡ್ ಸೇರಿದಂತೆ 106 ಪುಟಗಳ, 59 ಪ್ರಾಮಿಸ್ಗಳು, 101 ಗ್ಯಾರೆಂಟಿಗಳಿರೋ ಬೃಹತ್ ಮ್ಯಾನಿಫೆಸ್ಟೋ ರೆಡಿ ಮಾಡಿದ್ದಾರೆ. ನೀವೇನ್ ನಿರುದ್ಯೋಗಿಗಳಿಗೆ ಭತ್ಯೆ ಕೊಡೋದು, ನಾವು ಅದರ ಜೊತೆಗೆ ಶಾಲಾ ಮಕ್ಳಿಗೂ ಕೊಡ್ತೀವಿ ಅಂತ 1ನೇ ಕ್ಲಾಸ್ನಿಂದ 12th/puc ವರೆಗೂ 500 ರಿಂದ 1,500 ವರೆಗೆ ಪ್ರತಿ ತಿಂಗಳೂ ಕೊಡ್ತೀವಿ ಅಂದಿದಾರೆ. ಹೊಸ IPL ಟೀಮ್, ರೂ. 500ಕ್ಕೆ ಗ್ಯಾಸ್ ಸಿಲಿಂಡರ್, ಕನ್ಯಾ ವಿವಾಹ ಯೋಜನೆಗೆ 1.1 ಲಕ್ಷ, ಮಹಿಳಾ ಸ್ಟಾರ್ಟಪ್ಗಳಿಗೆ 25 ಲಕ್ಷ ಸಾಲ, ನೀರಾವರಿಗೆ ಉಚಿತ ವಿದ್ಯುತ್, ಭತ್ತ, ಗೋಧಿ ಬೆಳೆಗಳಿಗೆ ಸಪೋರ್ಟ್ ಪ್ರೈಸ್… ಹೀಗೆ ಸಾಲು ಸಾಲು ಗ್ಯಾರಂಟಿಗಳನ್ನ ಕಮಲ್ನಾಥ್ ಅನೌನ್ಸ್ ಮಾಡಿದ್ದಾರೆ. OBC ವರ್ಗಕ್ಕೆ ಸರ್ಕಾರಿ ಕೆಲಸಗಳಲ್ಲಿ 27% ಮೀಸಲಾತಿ, 2 ಲಕ್ಷ ಉದ್ಯೋಗಗಳ ಭರ್ತಿ, ರಾಜ್ಯಕ್ಕೆ ಮೊದಲ ಮೆಟ್ರೋ ತರ್ತೀವಿ ಅಂತ ಸಹ ಮ್ಯಾನಿಫೆಸ್ಟೋನಲ್ಲಿ ಉಲ್ಲೇಖಿಸಿದ್ದಾರೆ.
-masthmagaa.com
Contact Us for Advertisement