ಸತ್ತ ಮಹಿಳೆ ತಿಥಿ ಬಳಿಕ ಬದುಕಿ ಬಂದಾಗ..!

masthmagaa.com:

15 ದಿನಗಳ ಹಿಂದೆ ಮಣ್ಣು ಮಾಡಲಾಗಿದ್ದ ಮಹಿಳೆಯೊಬ್ಬರು ಜೀವಂತವಾಗಿ ಬದುಕಿ ಬಂದಿರೋ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಮೇ 15ರಂದು ವಿಜಯವಾಡ ಆಸ್ಪತ್ರೆ ಮುತ್ಯಲ ಗಿರಿಜಮ್ಮ ಅನ್ನೋರು ಸಾವನ್ನಪ್ಪಿದ್ಧಾರೆ ಅಂತ ಅವರ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಿತ್ತು. ಅದ್ರಂತೆ ಪತಿ ಮುತ್ಯಲ ಗಡ್ಡಯ್ಯ ತನ್ನ 70 ವರ್ಷದ ಪತ್ನಿಯ ಮೃತದೇಹ ತಗೊಂಡೋಗಿ ಅಂತ್ಯಸಂಸ್ಕಾರ ಮಾಡಿಸಿದ್ರು. ನಂತರ 14 ದಿನದ ನಂತರ ತಿಥಿನೂ ಮಾಡಿಯಾಗಿತ್ತು. ಆದ್ರೆ ಜೂನ್ 1ನೇ ತಾರೀಕು ಗಿರಿಜಮ್ಮ ವಾಪಸ್ ಬಂದಿದ್ದಾರೆ. ಕೃಷ್ಣ ಜಿಲ್ಲೆಯ ಕ್ರಿಶ್ಚಿಯನ್​ಪೇಟ್ ಗ್ರಾಮದ ಜನ ಒಂದು ಸಲ ಬೆಚ್ಚಿಬಿದ್ದಿದ್ದಾರೆ. ನಂತರ ನೋಡಿದ್ರೆ ಆಕೆ ಸತ್ತೇ ಇಲ್ಲ ಅಂತ ಗೊತ್ತಾಗಿದೆ. ಗಿರಿಜಮ್ಮ ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನ ಗಡ್ಡಯ್ಯ ಆಸ್ಪತ್ರೆಗೆ ಹೋಗ್ತಿದ್ರು. ಆದ್ರೆ ಮೇ 15ನೇ ತಾರೀಕು ಅಲ್ಲಿ ಗಿರಿಜಮ್ಮ ಇರಲೇ ಇಲ್ಲ. ಎಲ್ಲಾ ಕಡೆ ಹುಡುಕಾಡಿದ ಗಡ್ಡಯ್ಯ ನರ್ಸ್​​ಗಳ ಬಳಿ ಕೇಳಿದಾಗ, ಆಕೆ ಸಾವನ್ನಪ್ಪಿರಬೇಕು ಅಂತ ಹೇಳಿದ್ಧಾರೆ. ನಂತರ ಶವಾಗಾರದ ಬಳಿ ಹೋದಾಗ ಅಲ್ಲೂ ವೃದ್ಧೆಯೊಬ್ಬರ ದೇಹವನ್ನು ಕವರ್ ಮಾಡಿ ಕೊಟ್ಟಿದ್ದಾರೆ. ಈ ಗಡ್ಡಯ್ಯ ಅದ್ನ ತಗೊಂಡೋಗಿ ಅಂತ್ಯಸಂಸ್ಕಾರ, ತಿಥಿ ಮಾಡಿಸಿಬಿಟ್ಟಿದ್ರು.

-masthmagaa.com

Contact Us for Advertisement

Leave a Reply