masthmagaa.com:
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ದೇಶದ ಆರ್ಥಿಕತೆ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ್ದಾರೆ. ಬೋಪಾಲ್ನಲ್ಲಿ ನಡೆದ ಭಾರತೀಯ ಪಶುವೈದ್ಯಕೀಯ ಸಂಘದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಹಸುವಿನ ಸಗಣಿ ಮತ್ತು ಗೋಮೂತ್ರ ದೇಶದ ಆರ್ಥಿಕತೆ ಬಲಪಡಿಸುತ್ತೆ ಅಂತ ಹೇಳಿದ್ದಾರೆ. ಪಶುಗಳಿಲ್ಲದೇ ನಾವು ಮುಂದೆ ಸಾಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಶ್ರೀಕೃಷ್ಣ ಗೋವರ್ಧನ ಪೂಜೆ ಮಾಡಿದ್ರು. ಸರ್ಕಾರ ಅಭಯಾರಣ್ಯ ಮಾಡಿದೆ. ಗೋಶಾಲೆಗಳನ್ನು ಮಾಡಿದೆ. ಆದ್ರೆ ಇದ್ರಿಂದ ಕೆಲಸ ಆಗೋದಿಲ್ಲ. ವೈಯಕ್ತಿಕವಾಗಿ ಜನರು ಗೋವು, ಸಗಣಿ, ಗೋಮೂತ್ರದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಅದೇ ರೀತಿ ದೇಶದ ಆರ್ಥಿಕತೆ ಕೂಡ ಬಲಪಡಿಸಬಹುದು ಅಂತ ಹೇಳಿದ್ದಾರೆ.
-masthmagaa.com
Contact Us for Advertisement