masthmagaa.com:
ಕೋಲ್ಕತ್ತಾದಲ್ಲಿ ನಡೆಯಲಿರೋ ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಮಳೆಯ ಕರಿಮೋಡ ಆವರಿಸಿರೋ ಬೆನ್ನಲ್ಲೇ ಬಿಸಿಸಿಐ ಕೆಲವು ಹೊಸ ನಿಯಮಗಳನ್ನ ಪ್ರಕಟಿಸಿದೆ. ಇದ್ರ ಪ್ರಕಾರ ಪ್ಲೇ ಆಫ್ ಪಂದ್ಯಗಳು ಹವಮಾನ ವೈಪರೀತ್ಯಕ್ಕೆ ಸಿಲುಕಿದ್ರೆ, ಪಂದ್ಯವನ್ನ ನಿಗದಿತ ಸಮಯದಲ್ಲಿ ನಡೆಸಲು ಸಾಧ್ಯವಾಗದಿದ್ರೆ ಸೂಪರ್ ಓವರ್ ಮೂಲಕ ವಿಜೇತರನ್ನ ನಿರ್ಧರಿಸಲಾಗುತ್ತೆ. ಆದ್ರೆ ಅದು ಕೂಡ ಸಾಧ್ಯವಾಗದಿದ್ರೆ, ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವನ್ನ ವಿಜೇತ ಅಂತ ಘೋಷಿಸಲಾಗುತ್ತದೆ. ಅಂದ್ಹಾಗೆ ನಾಳೆ ನಡೆಯಲಿರೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜಿಯಾಂಟ್ಸ್ನ ಎದುರಿಸಲಿದೆ.
-masthmagaa.com
Contact Us for Advertisement