ಮೈಸೂರು ದಸರಾಗೆ ಚಾಲನೆ! ದುರ್ಗಾಪೂಜೆ ನಿಬಂಧನೆಗೆ ತೇಜಸ್ವಿ ಸೂರ್ಯ ವಿರೋಧ

masthmagaa.com:

ಮೈಸೂರು ದಸರಾಗೆ ಇಂದು ಮಾಜಿ ಸಿಎಂ ಎಸ್ಎಂ ಕೃಷ್ಣ ಅವ್ರು ಚಾಲನೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ರು. ಕೊರೋನ ಕಾರಣ ಸರಳವಾಗಿ ದಸರಾ ನಡೆಯಲಿದ್ದು, ಇಂದಿನಿಂದ 15ರವರೆಗೆ ನಡೆಯಲಿದೆ.

ಇನ್ನು ಬೆಂಗಳೂರಿನಲ್ಲಿ ದಸರಾ – ದುರ್ಗಾ ಪೂಜೆ ಸಂಬಂಧ ನಿರ್ಬಂಧಗಳನ್ನ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಕಮೀಷನರ್ ಹತ್ರ ಮಾತಾಡಿದ್ದಾರೆ. ನಿನ್ನೆಯಷ್ಟೆ ಬಿಬಿಎಂಪಿ, ದುರ್ಗಾ ಮೂರ್ತಿಯ ಎತ್ತರ 4 ಅಡಿ ಮೀರಂಗಿಲ್ಲ, 50ಕ್ಕಿಂತ ಹೆಚ್ಚಿನ ಜನ ಒಂದೇ ಸಲ ಸೇರಂಗಿಲ್ಲ ಅಂತೆಲ್ಲ ನಿರ್ಬಂಧ ಜಾರಿ ಮಾಡಿತ್ತು. ಇದು ಬೇಧಭಾವ ಹಾಗೂ ಲಾಜಿಕ್ ಇಲ್ಲದ ಕ್ರಮ ಅಂತ ತೆಜಸ್ವಿ ಸೂರ್ಯ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಮೀಷನರ್ ಹತ್ರ ಮಾತಾಡಿದ್ದೀನಿ. ಮರುಪರಿಶೀಲಿಸಲು ಆಗ್ರಹ ಮಾಡಿದ್ದೀನಿ. ಅವ್ರು ಕೂಡ ಇದನ್ನ ತೆಗೆದುಹಾಕುವ ಭರವಸೆ ನೀಡಿದ್ದಾರೆ ಅಂತ ತೇಜಸ್ವಿ ಸೂರ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply