masthmagaa.com:
ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಬೇಕು ಅಂತ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ನಿಯೋಗ ಇವತ್ತು ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಬಿಹಾರದ ಒಟ್ಟು 11 ಪಕ್ಷದ ನಾಯಕರು ಈ ನಿಯೋಗದಲ್ಲಿದ್ರು. ರಾಜಕೀಯದಲ್ಲಿ ನಿತೀಶ್ ಅವರ ಬದ್ಧ ವಿರೋಧಿ ನಾಯಕ ಎನಿಸಿಕೊಂಡಿರೋ ಆರ್ಜೆಡಿಯ ತೇಜಸ್ವಿ ಯಾದವ್ ಕೂಡ ಈ ನಿಯೋಗದಲ್ಲಿದ್ರು. ಪ್ರಧಾನಿ ಭೇಟಿಯಾದ ಬಳಿಕ ಮಾತನಾಡಿದ ನಿತೀಶ್ ಕುಮಾರ್, ಪ್ರಧಾನಿಗಳು ನಮ್ಮ ಬೇಡಿಕೆಯನ್ನ ಆಲಿಸಿದ್ದಾರೆ. ಈಗ ಏನಿದ್ರೂ ಅವರು ನಿರ್ಧಾರ ತಗೋಬೇಕು. ಬಿಹಾರ ಮಾತ್ರವಲ್ಲ ಇಡೀ ದೇಶದ ಜನ ಜಾತಿ ಆಧಾರಿತ ಜನಗಣತಿ ಬೇಕು ಅಂತಿದ್ದಾರೆ ಎಂದಿದ್ದಾರೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಇದನ್ನೇ ಹೇಳಿದ್ದಾರೆ. AIMIM ಪಕ್ಷದ ಅಸಾದುದ್ದಿನ್ ಓವೈಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಜಾತಿಗಣತಿ ತುಂಬಾ ಇಂಪಾರ್ಟೆಂಟ್. ಹೀಗಾಗಿ ಪ್ರಧಾನಿ ಮೋದಿ ಇದಕ್ಕೆ ಸಂಬಂಧಿಸಿದಂತೆ ಒಂದು ಕಾನೂನು ಜಾರಿಗೆ ತರಬೇಕು ಅಂತ ಆಗ್ರಹಿಸಿದ್ದಾರೆ. ಕಾಂಗ್ರೆಸ್ನ ಅಜಿತ್ ಶರ್ಮಾ ಮಾತನಾಡಿ, ಮೀಸಲಾತಿಯಲ್ಲಿ ಪಾರದರ್ಶಕತೆ ಬರಬೇಕು ಅಂದ್ರೆ ಯಾವ ವರ್ಗದ ಜನ ಹಿಂದುಳಿದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಬೇಕು. ಆಗ ಮಾತ್ರ ಅದು ಸಾಧ್ಯ ಎಂದಿದ್ದಾರೆ.
-masthmagaa.com
Contact Us for Advertisement