masthmagaa.com:
ಚಿಪ್ಕೋ ಚಳುವಳಿಯ ನಾಯಕ ಸುಂದರ್ಲಾಲ್ ಬಹುಗುಣ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ದೆಹಲಿ ವಿಧಾನಸಭೆಯಲ್ಲಿ ನಿರ್ಣಯವನ್ನ ಪಾಸ್ ಮಾಡಲಾಗಿದೆ. ಅಂದ್ಹಾಗೆ ಸುಂದರ್ಲಾಲ್ ಬಹುಗುಣ ಈ ವರ್ಷದ ಮೇನಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು. ಮಹಾನ್ ಪರಿಸರವಾದಿಯಾಗಿದ್ದ ಇವರು 1970ರ ದಶಕದಲ್ಲಿ ಉತ್ತರಾಖಂಡ್ನಲ್ಲಿ ಕಂಟ್ರಾಕ್ಟರ್ಗಳು ಮರ ಕಡಿಯೋಕೆ ಮುಂದಾದಾಗ ಮರಕ್ಕೆ ಅಪ್ಪಿಕೊಂಡು ಚಿಪ್ಕೋ ಚಳುವಳಿ ಆರಂಭಿಸಿದ್ರು. ಮುಂದೆ 1983ರಲ್ಲಿ ಕರ್ನಾಟಕದ ಪರಿಸರವಾದಿ ಪಾಂಡುರಂಗ ಹೆಗ್ಡೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮರಗಳನ್ನ ಉಳಿಸಲು ಅಪ್ಪಿಕೋ ಚಳುವಳಿಯನ್ನ ಶುರು ಮಾಡಿದ್ರು. ಸುಂದರ್ಲಾಲ್ ಬಹುಗುಣಗೆ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. ಆದ್ರೆ ಅದನ್ನ ಅವರು ನಿರಾಕರಿಸಿದ್ರ. 2009ರಲ್ಲಿ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸ್ತು. ಇದೀಗ ಭಾರತ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನ ಮರಣೋತ್ತರವಾಗಿ ನೀಡುವಂತೆ ದೆಹಲಿಯ ಕೇಜ್ರಿವಾಲ್ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
-masthmagaa.com
Contact Us for Advertisement