ಕೇಜ್ರಿವಾಲ್‌ಗೆ ಮದ್ಯ ಹಗರಣ ಕೇಸ್‌ಲ್ಲಿ ರಕ್ಷಣೆ ನೀಡಲ್ಲ: ದಿಲ್ಲಿ ಹೈಕೋರ್ಟ್

masthmagaa.com:

ದಿಲ್ಲಿ ಮದ್ಯ ಹಗರಣ ಕೇಸ್‌ನಲ್ಲಿ 9 ಸಮನ್ಸ್‌ಗಳನ್ನ ಪಡೆದ್ರು ಕ್ಯಾರೆ ಅನ್ನದ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಬಂಧನದ ಭೀತಿ ಎದುರಾಗಿರೋ ಹಾಗಿದೆ. ʻED ಅಧಿಕಾರಿಗಳ ಸಮನ್ಸ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಕೇಜ್ರಿವಾಲ್‌ಗೆ ಮದ್ಯಹಗರಣ ನೀತಿ ಕೇಸ್‌ನಲ್ಲಿ ರಕ್ಷಣೆ ನೀಡೊಕ್ಕಾಗಲ್ʼ ಅಂತ ದಿಲ್ಲಿ ಹೈಕೋರ್ಟ್‌ ಸ್ಪಷ್ಟ ಪಡಿಸಿದೆ. ಅಲ್ದೇ ಕೇಜ್ರಿವಾಲ್‌ಗೆ ನೀಡಿರೊ ಸಮನ್ಸ್‌ಗಳ ಬಗ್ಗೆ ಏಪ್ರಿಲ್‌ 22ಕ್ಕೆ ಅಂದ್ರೆ ನಾಳೆ ಮಾಹಿತಿ ನೀಡಿ ಅಂತ ಹೈಕೋರ್ಟ್‌ ED ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಂದ್ಹಾಗೆ ಈ ಮದ್ಯ ಹಗರಣ ಕೇಸ್‌ನಲ್ಲಿ ಇಡಿ ಅಧಿಕಾರಿಗಳ ಸಮನ್ಸ್‌ ವಿರುದ್ದ‌ ಕೇಜ್ರಿವಾಲ್ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ರು.

-masthmagaa.com

Contact Us for Advertisement

Leave a Reply