masthmagaa.com:
ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿಗೆ ಅರೆಸ್ಟ್ನಿಂದ ರಕ್ಷಣೆ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದ್ರೆ ಎರಡು ಪ್ರಕರಣಗಳಿಗೆ ಮರುಜೀವ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಿರಾಕರಿಸಿದೆ. ಜನವರಿ 6ನೇ ತಾರೀಖು ಒಂದು ಡಿನೋಟಿಫಿಕೇಶನ್ ಪ್ರಕರಣ ಹಾಗೂ ಮತ್ತೊಂದು ಉದ್ಯಮಿಯೊಬ್ಬರಿಗೆ ಜಮೀನು ಸ್ಯಾಂಕ್ಷನ್ಗೆ ಒಪ್ಪಿಗೆ ನೀಡಿ ಬಳಿಕ ಕೈಕೊಟ್ಟಿದ್ದ ಪ್ರಕರಣ ಸಂಬಂಧ ಹೈಕೋರ್ಟ್ ತೀರ್ಪು ನೀಡಿತ್ತು. ಎರಡೂ ಪ್ರಕರಣಗಳಿಗೆ ಮರುಜೀವ ನೀಡಲು ಅವಕಾಶ ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಸಿಎಂ ಯಡಿಯೂರಪ್ಪ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ಇವತ್ತು ವಿಚಾರಣೆ ವೇಳೆ ಸಿಜೆಐ ಎಸ್.ಎ. ಬೊಬ್ಡೆ, ನೀವು ರಾಜ್ಯದ ಹಾಲಿ ಮುಖ್ಯಮಂತ್ರಿ. ನಿಮ್ಮ ವಿರುದ್ಧ ಯಾರು ಅರೆಸ್ಟ್ ವಾರಂಟ್ ಇಶ್ಯೂ ಮಾಡ್ತಾರೆ. ಹೆಚ್ಚಂದ್ರೆ ಅವರು ನಿಮಗೆ ರಿಕ್ವೆಸ್ಟ್ ಮಾಡ್ಬೋದು ಅಂತ ಹೇಳಿದ್ರು. ಇದೇ ವೇಳೆ ಯಡಿಯೂರಪ್ಪ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಎರಡು ಪ್ರಕರಣಗಳಿಗೆ ಮರುಜೀವ ನೀಡಿರೋದ್ರಿಂದ ಅರೆಸ್ಟ್ ಆಗುವ ಸಾಧ್ಯತೆ ಇರುತ್ತೆ ಅಂತ ಹೇಳಿದ್ರು. ಕೊನೆಗೆ ಸಿಎಂ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿಗೆ ಅರೆಸ್ಟ್ನಿಂದ ರಕ್ಷಣೆ ನೀಡ್ತು ಸುಪ್ರೀಂಕೋರ್ಟ್.
-masthmagaa.com
Contact Us for Advertisement