masthmagaa.com:
ಡೇರಾ ಸಚ್ಚ ಸೌದಾ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಂ ಮತ್ತು ಇತರ ನಾಲ್ವರಿಗೆ ಸಿಬಿಐ ವಿಶೇಷ ಕೋರ್ಟ್ ಜೀವಿತಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಗುರುಮೀತ್ ರಾಮ್ ರಹೀಂಗೆ 31 ಲಕ್ಷ ದಂಡ ಮತ್ತು ಇತರರಿಗೆ ತಲಾ 50 ಸಾವಿರ ದಂಡ ವಿಧಿಸಲಾಗಿದೆ. ದಂಡದ 50 ಪರ್ಸೆಂಟ್ ಮೊತ್ತ ಕೊಲೆಯಾದ ರಂಜಿತ್ ಸಿಂಗ್ ಕುಟುಂಬಕ್ಕೆ ಹೋಗಲಿದೆ. 2002ನೇ ಇಸವಿಯಲ್ಲಿ ರಂಜಿತ್ ಸಿಂಗ್ನನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು. ಗುರುಮಿತ್ ರಾಮ್ ರಹೀಮ್ ಮಹಿಳೆಯರನ್ನ ಯಾವ ರೀತಿ ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದಾನೆ ಅನ್ನೋದಕ್ಕೆ ಸಂಬಂಧಿಸಿದ ಲೆಟರ್ವೊಂದು ಹರಿದಾಡಿತ್ತು. ಈ ಲೆಟರ್ ಹಿಂದೆ ರಂಜಿತ್ ಸಿಂಗ್ ಕೈವಾಡನೇ ಇದೆ ಅಂತ ಗುರುಮೀರ್ ರಾಮ್ ರಹೀಮ್ ನಂಬಿಕೆಯಾಗಿತ್ತು. ಹೀಗಾಗಿ ಕೊಲೆ ಮಾಡಿಸಿದ್ದಾನೆ ಅಂತ ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿತ್ತು.
-masthmagaa.com
Contact Us for Advertisement