ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಡಿಕೆಶಿ ಕೆಂಡ!

masthmagaa.com:

ಹಾಸನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರ ವಿರುದ್ಧ ಎರಡೆರಡು ಸಲ ಗರಂ ಆದ್ರು. ಮೊದಲನೇಸಲ ಕೆಲ ಕಾರ್ಯರ್ತರು ಡಿಕೆ ಶಿವಕುಮಾರ್​ಗೆ ಜೈ ಅಂತ ಕೂಗಿದ್ದಾರೆ. ಈ ವೇಳೆ ಸಿಟ್ಟಾದ ಡಿಕೆಶಿ ಶಿವಕುಮಾರ್​, ನೀವೇನಾದ್ರೂ ಇನ್ನೊಂದುಸಲ ಜೈಕಾರ ಹಾಕಿದ್ರೆ ನಾನು ಭಾಷಣ ಮಾಡೋದನ್ನ ಬಿಟ್ಟು ಅರ್ಧಕ್ಕೆ ವಾಪಸ್​ ಹೋಗ್ತೀನಿ ಅಷ್ಟೇ. ಜೈಕಾರ ಹಾಕೋದಾದ್ರೆ ಬಿಜೆಪಿ ಮತ್ತು ಜೆಡಿಎಸ್​ ಅನ್ನ ಸೋಲಿಸಿ ಜೈಕಾರ ಅಂದ್ರು. ಇದೇ ವೇಳೆ ಕಾರ್ಯಕರ್ತರೊಬ್ರು ಡಿಕೆಶಿ ಕಾಲಿಗೆ ಬಿದ್ದಿದ್ದಾರೆ. ಅವರ ವಿರುದ್ಧವೂ ಸಿಟ್ಟಾದ ಡಿಕೆಶಿ, ಕಾಲಿಗೆ ಬೀಳೋಕೆ ನಾನೇನು ಸ್ವಾಮೀಜಿನಾ. ಎದ್ದು ಸೈಡಿಗೆ ಹೋಗು ಎಂದಿದ್ದಾರೆ.

-masthmagaa.com

Contact Us for Advertisement

Leave a Reply