masthmagaa.com:
ಹಾಸನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರ ವಿರುದ್ಧ ಎರಡೆರಡು ಸಲ ಗರಂ ಆದ್ರು. ಮೊದಲನೇಸಲ ಕೆಲ ಕಾರ್ಯರ್ತರು ಡಿಕೆ ಶಿವಕುಮಾರ್ಗೆ ಜೈ ಅಂತ ಕೂಗಿದ್ದಾರೆ. ಈ ವೇಳೆ ಸಿಟ್ಟಾದ ಡಿಕೆಶಿ ಶಿವಕುಮಾರ್, ನೀವೇನಾದ್ರೂ ಇನ್ನೊಂದುಸಲ ಜೈಕಾರ ಹಾಕಿದ್ರೆ ನಾನು ಭಾಷಣ ಮಾಡೋದನ್ನ ಬಿಟ್ಟು ಅರ್ಧಕ್ಕೆ ವಾಪಸ್ ಹೋಗ್ತೀನಿ ಅಷ್ಟೇ. ಜೈಕಾರ ಹಾಕೋದಾದ್ರೆ ಬಿಜೆಪಿ ಮತ್ತು ಜೆಡಿಎಸ್ ಅನ್ನ ಸೋಲಿಸಿ ಜೈಕಾರ ಅಂದ್ರು. ಇದೇ ವೇಳೆ ಕಾರ್ಯಕರ್ತರೊಬ್ರು ಡಿಕೆಶಿ ಕಾಲಿಗೆ ಬಿದ್ದಿದ್ದಾರೆ. ಅವರ ವಿರುದ್ಧವೂ ಸಿಟ್ಟಾದ ಡಿಕೆಶಿ, ಕಾಲಿಗೆ ಬೀಳೋಕೆ ನಾನೇನು ಸ್ವಾಮೀಜಿನಾ. ಎದ್ದು ಸೈಡಿಗೆ ಹೋಗು ಎಂದಿದ್ದಾರೆ.
-masthmagaa.com
Contact Us for Advertisement