masthmagaa.com:
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ತಂಡವು ನಿನ್ನೆ ರಾತ್ರಿ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಲಕ್ ತಿವಾರಿ, ವಿನಾಲಿ ಭಟ್ನಾಗರ್, ಸಿದ್ಧಾರ್ಥ್ ನಿಗಮ್, ರಾಘವ್ ಜುಯಲ್, ಮತ್ತು ಜಸ್ಸಿ ಗಿಲ್ ಸೇರಿದಂತೆ ಇಡೀ ಚಿತ್ರತಂಡವು ಶೋನಲ್ಲಿ ಒಳ್ಳೆಯ ಟೈಮ್ ಸ್ಪೆಂಡ್ ಮಾಡಿದರು. ಅಭಿಮಾನಿಗಳಿಗೆ ಗೊತ್ತಿರದ ತಮ್ಮ ಜೀವನದ ಕೆಲವು ಸಿಹಿ ಕಹಿ ಘಟನೆಗಳ ಬಗ್ಗೆ ಎಲ್ಲರೂ ಮಾತನಾಡಿದರು. ಇದೇ ಸಮಯದಲ್ಲಿ ಸಲ್ಮಾನ್ ಖಾನ್ “ಮನೆಯಲ್ಲಿ ಊಟ ಸಾಕಾಗ್ತಾ ಇರಲಿಲ್ಲಾ” ಅನ್ನೋ ವಿಷಯದ ಬಗ್ಗೆ ಮಾತನಾಡಿದ್ದಾರೆ.
“ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಊಟವನ್ನ ರೆಡಿ ಮಾಡ್ತಾ ಇರಲಿಲ್ಲ, ಹಾಗಾಗಿ ನಾನು ಮತ್ತು ನನ್ನ ಫ್ರೆಂಡ್ಸ್ ಬಾಂದ್ರಾದಲ್ಲಿ ಎಲ್ಲಾ ರೀತಿಯ ಹಣ್ಣುಗಳನ್ನ ತಿನ್ನುತ್ತಿದ್ದೆವು, ಎಲ್ಲರ ಮನೆಯ ತೋಟಗಳಿಗೂ ಹೋಗಿ ಮರವನ್ನ ಹತ್ತಿ ಹಣ್ಣುಗಳನ್ನ ಕದ್ದು ತಿನ್ನುತ್ತಿದ್ದೆವು, ಹಣ್ಣು ತಿನ್ನುವುದರ ಜೊತೆಗೆ ಮಾಲೀಕರ ಹತ್ತಿರ ಹೊಡೆತವನ್ನೂ ತಿಂದಿದ್ದೆವು” ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಈಗ ಭಾರತದ ದೊಡ್ಡ ಸೂಪರ್ಸ್ಟಾರ್ಗಳಲ್ಲಿ ಒಬ್ಬರು, ಆದರೆ ಅವರ ಜರ್ನಿನಾವು ಅಂದುಕೊಂಡಷ್ಟು ಈಸಿಯಾಗಿ ಇರಲಿಲ್ಲ ಅನ್ನೋದು ಇದೆಲ್ಲಾ ಘಟನೆಗಳನ್ನ ನೋಡಿದ್ರೆ ಗೊತ್ತಾಗತ್ತೆ. IIFFA ಪ್ರಶಸ್ತಿ 2022 ರಲ್ಲಿ, ಸಲ್ಮಾನ್ ಖಾನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡು ವೇದಿಕೆಯಲ್ಲಿ ಭಾವುಕರಾಗಿದ್ದರು.
-masthmagaa.com
Contact Us for Advertisement