masthmagaa.com:
ನ್ಯಾಯಾಂಗ ಬಂಧನದಲ್ಲಿರೋ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ತಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚು ಮಾಡೋಕೆ ಮಾವಿನ ಹಣ್ಣು, ಆಲೂ ಪೂರಿ ಮತ್ತು ಸ್ವೀಟ್ಗಳನ್ನ ಪ್ರತೀದಿನ ತಿಂತಿದ್ದಾರಂತೆ. ಈ ಮೂಲಕ ಮೊದಲೇ ಡಯಾಬೀಟಿಕ್ ಪೇಶಂಟ್ ಆಗಿರೋ ಕೇಜ್ರಿವಾಲ್ ಮೆಡಿಕಲ್ ಬೈಲ್ ಪಡೆಯೋಕೆ ಪ್ರಯತ್ನ ಪಡ್ತಿದ್ದಾರೆ ಅಂತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಇನ್ನು ED ಮಾಡಿರೋ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ರ ವಕೀಲರಾದ ವಿವೇಕ್ ಜೈನ್ ರಿಯಾಕ್ಟ್ ಮಾಡಿದ್ದಾರೆ. ʻಈ ಮ್ಯಾಟರ್ ಸದ್ಯ ಕೋರ್ಟ್ ಮುಂದೆ ಇದೆ. ಕೇಜ್ರಿವಾಲ್ರಿಗೆ ಮನೆಯಿಂದ ಊಟ ಹೋಗ್ತಿರೋದನ್ನ ತಡೆಯೋಕೆ ED ಅಧಿಕಾರಿಗಳು ಈ ರೀತಿ ಕಥೆ ಕಟ್ಟಿದ್ದಾರೆʼ ಅಂದಿದ್ದಾರೆ. ಇನ್ನೊಂದ್ಕಡೆ ಆಪ್ ನಾಯಕಿ ಅತಿಶಿ ಅವ್ರು, ʻಈ ರೀತಿ ಮನೆಯಿಂದ ಹೋಗೋ ಊಟ ನಿಲ್ಲಿಸಿ ಅರವಿಂದ್ ಕೇಜ್ರಿವಾಲ್ರ ಹತ್ಯೆ ಮಾಡೋಕೆ ಸಂಚು ರೂಪಿಸಲಾಗ್ತಿದೆ. ಅವ್ರ ಆರೋಗ್ಯ ಕೆಡಿಸಲು ಬಿಜೆಪಿ ಟ್ರೈ ಮಾಡ್ತಿದೆʼ ಅಂತ ಆರೋಪಿಸಿದ್ದಾರೆ.
masthmagaa.com
Contact Us for Advertisement