masthmagaa.com:
ತಮಿಳುನಾಡಿನಲ್ಲಿ ಇಷ್ಟು ದಿನ ತಲೆ ಮರೆಸಿಕೊಂಡು ಓಡಾಡ್ತಿದ್ದ ನರಭಕ್ಷಕ ಹುಲಿ ಅರಣ್ಯ ಇಲಾಖೆ ಬಲೆಗೆ ಬಿದ್ದಿದೆ. ನೀಲಗಿರಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಈ ಹುಲಿ ನಾಲ್ವರನ್ನು ಬಲಿ ಪಡೆದುಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಹುಲಿ ಹಿಡಿಯೋಕೆ ಪ್ರಯತ್ನಿಸುತ್ತಲೇ ಇದ್ರು. ಈ ನಡುವೆ ಮದ್ರಾಸ್ ಹೈಕೋರ್ಟ್ ಕೂಡ ಹುಲಿಯನ್ನು ಕೊಲ್ಲಬಾರದು. ಜೀವಂತವಾಗಿ ಸೆರೆ ಹಿಡಿಯಬೇಕು ಅಂತ ಸೂಚಿಸಿತ್ತು. ಅದರಂತೆ ನೂರಾರು ಅರಣ್ಯ ಸಿಬ್ಬಂದಿ ಮತ್ತು ಪಳಗಿಸಿದ ಆನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ವು. ಕೊನೆಗೂ ಈಗ ಜೀವಂತವಾಗಿ ಹುಲಿಯನ್ನು ಬೋನಿಗೆ ಬೀಳಿಸಲಾಗಿದೆ.
-masthmagaa.com
Contact Us for Advertisement