masthmagaa.com:
ತೆಲಂಗಾಣದ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ ಅಹ್ಮದ್ ಖಾನ್ ‘ಕರ್ನಾಟಕದಲ್ಲಿ ಮುಸ್ಲಿಂ ಸ್ಫೀಕರ್ಗೆ ಬಿಜೆಪಿ ಶಾಸಕರು ನಮಸ್ಕಾರ ಮಾಡ್ತಾರೆ’ ಅಂದಿದ್ರು. ಈ ವಿವಾದಾತ್ಮಕ ಹೇಳಿಕೆ ಸ್ವತಃ ಸ್ವಪಕ್ಷದವರನ್ನೇ ಮುಜುಗರಕ್ಕೀಡು ಮಾಡಿತ್ತು. ಇದಕ್ಕೆ ಈಗ ರಿಯಾಕ್ಟ್ ಮಾಡಿರೋ ಸ್ಪೀಕರ್ ಯು.ಟಿ.ಖಾದರ್ ಜಾತಿ ಆಧರಿಸಿ ನನ್ನನ್ನ ಈ ಪೀಠದಲ್ಲಿ ಕೂರಿಸಿಲ್ಲ, ಅರ್ಹತೆಗೆ ಅನುಗುಣವಾಗಿ ಸ್ಥಾನವನ್ನು ನೀಡಿದ್ದಾರೆ. ಎಲ್ಲರಿಗೆ ಗೌರವ ನೀಡಿ ಈ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ ಹಾಗೂ ಎಲ್ಲರೂ ಗೌರವ ನೀಡೋದು ಸಂವಿಧಾನ ಪೀಠಕ್ಕೆ ಹೊರತು ನನಗಲ್ಲ , ಜಮೀರ್ ಹೇಳಿಕೆಗೆ ನಾನ್ ಏನೂ ಹೇಳಲು ಬಯಸುವುದಿಲ್ಲ ಅಂತಾ ಯು.ಟಿ.ಖಾದರ್ ಹೇಳಿದ್ದಾರೆ.
-masthmagaa.com
Contact Us for Advertisement