masthmagaa.com:
ಯುಕ್ರೇನ್ ಯುದ್ದದ ವೇಳೆ ಸಾವೀಗೀಡಾಗಿದ್ದ ಹಾವೇರಿ ಜಿಲ್ಲೆಯ ಮೆಡಿಕಲ್ ವಿಧ್ಯಾರ್ಥಿ ನವೀನ್ ಶೇಕರಪ್ಪ ಗ್ಯಾನಗೌಡರ್ ಅವರ ಮೃತದೇಹವನ್ನ ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ತರಲಾಯ್ತು. ಅಲ್ಲಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಶವ ಸ್ವೀಕರಿಸಿದ್ರು. ಬಳಿಕ ನವೀನ್ ಸ್ವಗ್ರಾಮವಾದ ರಾಣೆಬೆನ್ನೂರು ತಾಲ್ಲೂಕಿನ ಚಳ್ಳಗೆರೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಬಳಿಕ ಮೃತದೇಹವನ್ನು ಅಂತಿಮ ಮೆರವಣಿಗೆ ನಡೆಸಿ, ಆಂಬುಲೆನ್ಸ್ ನಲ್ಲಿ ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಯ್ತು. ಅಂದ್ಹಾಗೆ ಯುಕ್ರೇನ್ನ ಖಾರ್ಕಿವ್ ನಗರದಲ್ಲಿ ಮೆಡಿಕಲ್ ಓದುತ್ತಿದ್ದ ನವೀನ್, ಮಾರ್ಚ್ 1 ರಂದು ರಷ್ಯಾದ ದಾಳಿಯಲ್ಲಿ ಬಲಿಯಾಗಿದ್ರು. ಅವರ ಆಸೆಯಂತೆ ಕುಟುಂಬ ಈಗ ದೇಹದಾನ ಮಾಡಿದೆ.
-masthmagaa.com
Contact Us for Advertisement