ರೈತರ ಪ್ರತಿಭಟನೆ: ಪೊಲೀಸರಿಂದ ಅಶ್ರುವಾಯು ಬಳಕೆ!

masthmagaa.com:

ಇನ್ನು ಹರ್ಯಾಣ ಪಂಜಾಬ್‌ ರೈತರ ಹೋರಾಟದ ವಿಚಾರಕ್ಕೆ ಬಂದ್ರೆ, ಇಂದು ದೆಹಲಿಗೆ ಮುತ್ತಿಗೆ ಹಾಕೋಕೆ ಪ್ರಯತ್ನ ಪಟ್ಟ ರೈತರನ್ನ ತಡೆಯೋಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರ ಬ್ಯಾರಿಕ್ಯಾಡ್‌, ಕಾಂಕ್ರೀಟ್‌ ಬ್ಲಾಕ್‌, ಕಬ್ಬಿಣದ ಮುಳ್ಳುಗಳು ಯಾವುದಕ್ಕೂ ರೈತರೂ ಕ್ಯಾರೆ ಅಂದಿಲ್ಲ. ಅವ್ರನ್ನ ಹತ್ತಿಕ್ಕೋಕೆ ಪೊಲೀಸರು ಟಿಯರ್‌ ಗ್ಯಾಸನ್ನೂ ಬಳಸಿದ್ದಾರೆ. ದೆಹಲಿಗೆ ಸಂಪರ್ಕ ಕಲ್ಪಿಸೋ ರೋಡ್‌ಗಳು ಆಲ್ಮೋಸ್ಟ್‌ ಬ್ಲಾಕ್‌ ಆಗಿವೆ. ದೆಹಲಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ವಿವಿಧ ಬೇಡಿಕೆಗಳನ್ನ ಪೂರೈಸುವಂತೆ ಮಾಡ್ತಿರೋ ಪ್ರತಿಭಟನೆಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ರೆಸ್ಪಾನ್ಸ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply