ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರಿಂದ ಟ್ರಾಕ್ಟರ್​ ಪರೇಡ್​!

masthmagaa.com:

ಜನವರಿ 4ರಂದು ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಒಂದ್ವೇಳೆ ಈ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ರೆ ಜನವರಿ 26ರಂದು ಅಂದ್ರೆ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ‘ಕಿಸಾನ್ ಗಣತಂತ್ರ ಪರೇಡ್​’ ನಡೆಸ್ತೀವಿ, ‘ಟ್ರಾಕ್ಟರ್​ ಪರೇಡ್​’ ನಡೆಸ್ತೀವಿ ಅಂತ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿವೆ. ರೈತ ಮುಖಂಡರ ಪ್ರಮುಖ ಬೇಡಿಕೆನೇ, ಮೂರು ಕೃಷಿ ಕಾನೂನುಗಳನ್ನ ವಾಪಸ್ ಪಡೀಬೇಕು ಅಂತ. ಆದ್ರೆ ಕೇಂದ್ರ ಸರ್ಕಾರ ಮಾತ್ರ ಕೃಷಿ ಕಾನೂನುಗಳನ್ನ ವಾಪಸ್ ಪಡೆಯೋ ಥರ ಕಾಣ್ತಿಲ್ಲ. ಸೋ ಬಾರಿಯ ರೈತರ ಪ್ರತಿಭಟನೆ ಗಣರಾಜ್ಯೋತ್ಸವ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ ಅವರನ್ನ ಅತಿಥಿಯಾಗಿ ಭಾರತ ಆಹ್ವಾನಿಸಿದೆ. ಅವ್ರು ಬರ್ತಾರಾ ಇಲ್ವಾ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

-masthmagaa.com

Contact Us for Advertisement

Leave a Reply