masthmagaa.com:
ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ನಿನ್ನೆ ನಡೆದ ಸಭೆ ವಿಫಲವಾದ ಬೆನ್ನಲ್ಲೇ ರೈತರು ರೊಚ್ಚಿಗೆದ್ದಿದ್ದಾರೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಜನವರಿ 7ನೇ ತಾರೀಖು ಟ್ರಾಕ್ಟರ್ ರ್ಯಾಲಿ ನಡೆಸ್ತೀವಿ ಅಂತ ಹೇಳಿದ್ದಾರೆ. ದೆಹಲಿಯ ಗಡಿ ಭಾಗಗಳಲ್ಲಿ ಈ ರ್ಯಾಲಿ ನಡೆಯಲಿದೆ. ಜನವರಿ 26ನೇ ತಾರೀಖು ನಾವು ಏನು ಮಾಡಲು ಹೊರಟಿದ್ದೀವೋ ಅದರ ಟ್ರೇಲರ್ ಇದಾಗಲಿದೆ ಅಂತ ರೈತ ಸಂಘಟನೆಗಳು ಕೇಂದ್ರ ಸರ್ಕಾರವನ್ನ ಎಚ್ಚರಿಸಿದೆ. ಅಲ್ಲದೆ ನಾಳೆಯಿಂದ 2 ವಾರಗಳ ಕಾಲ ‘ದೇಶ್ ಜಾಗರಣ ಅಭಿಯಾನ್’ ನಡೆಯಲಿದೆ. ದೇಶಾದ್ಯಂತ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳಲಿದೆ ಅಂತ ಸ್ವರಾಜ್ ಇಂಡಿಯಾ ಸಂಘಟನೆ ಹೇಳಿದೆ.
-masthmagaa.com
Contact Us for Advertisement