ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ್ದು ತಪ್ಪು: ಫಾರೂಕ್ ಅಬ್ದುಲ್ಲಾ

masthmagaa.com:
ಭಾರತವನ್ನ ಧರ್ಮದ ಆಧಾರದಲ್ಲಿ ವಿಭಜನೆ ಮಾಡಿದ್ದು ಐತಿಹಾಸಿಕ ತಪ್ಪು, ಅಂದಿನಿಂದ ಪಾಕಿಸ್ತಾನ ನಮ್ಮ ಮೇಲೆ ಪ್ರಾಕ್ಸಿ ವಾರ್ ಮಾಡ್ತಾ ಬರ್ತಿದೆ ಅಂತ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ನಿನ್ನೆಯಷ್ಟೇ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರೋ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ, ರಾಜ್​ನಾಥ್​ ಸಿಂಗ್​ ಅವರ ಹೇಳಿಕೆಯನ್ನ ನಾನು ಕೂಡ ಒಪ್ಪಿಕೊಳ್ತೀನಿ. ಇದೇ ಕಾರಣಕ್ಕೆ ಭಾರತೀಯ ಮುಸ್ಲಿಮರು ತೊಂದ್ರೆ ಅನುಭವಿಸುತ್ತಿದ್ದಾರೆ. ಭಾರತ-ಪಾಕ್​ ನಡುವಿನ ಸಂಘರ್ಷ ಧಾರ್ಮಿಕ ಉದ್ವಿಗ್ನತೆಯನ್ನ ಹೆಚ್ಚಿಸುತ್ತೆ. ಭಾರತ ವಿಭಜನೆಯಾಗದೇ ಇದ್ರೆ ಇದನ್ನ ತಪ್ಪಿಸಬಹುದಿತ್ತು ಅಂತ ಫಾರೂಕ್​ ಅಬ್ದುಲ್ಲಾ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply