ಕೇಂದ್ರದ ಬಿಜೆಪಿ ಸರ್ಕಾರ ಕಿತ್ತು, ಬಂಗಾಳ ಕೊಲ್ಲಿಗೆ ಎಸೆಯಬೇಕು: ಕೆಸಿಆರ್​​​​

masthmagaa.com:

ಕೇಂದ್ರ ಬಜೆಟ್​​​ಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತು ಬಂಗಾಳ ಕೊಲ್ಲಿಗೆ ಎಸೆಯಬೇಕು ಅಂತ ಹೇಳಿದ್ದಾರೆ. ನಮ್ಮ ಪ್ರಧಾನಿ ದೂರ ದೃಷ್ಟಿಯನ್ನು ಹೊಂದಿಲ್ಲ. ದೇಶಕ್ಕಾಗಿ ಏನ್ ಬೇಕಾದ್ರು ಮಾಡಲು ಸಿದ್ಧ.. ಇದು ಪ್ರಜಾಪ್ರಭುತ್ವ.. ನಾವು ಸುಮ್ಮನೆ ಕೂರೋದಿಲ್ಲ ಅಂತ ಹೇಳಿದ್ದಾರೆ. ದೇಶದಲ್ಲಿ ನಾಯಕತ್ವ ಬದಲಾವಣೆಯ ಅವಶ್ಯಕತೆ ಇದೆ. ಇದೇ ವಿಚಾರವಾಗಿ ಚರ್ಚಿಸೋಕೆ ನಾನು ಮುಂಬೈಗೆ ಹೋಗ್ತಿದ್ದೀನಿ. ಹೊಸ ಆಲೋಚನೆಯೊಂದಿಗೆ ದೇಶದ ಸಂವಿಧಾನವನ್ನು ಹೊಸದಾಗಿ ಬರೆಯೋ ಅವಶ್ಯಕತೆ ಇದೆ. ಬಲಪಡಿಸೋ ಅವಶ್ಯಕತೆ ಇದೆ ಅಂತಲೂ ಹೇಳಿದ್ದಾರೆ. ಈ ಮೂಲಕ ಕೆಸಿಆರ್ ರಾಷ್ಟ್ರ ರಾಜಕಾರಣಕ್ಕೆ ಬರೋ ಸುಳಿವು ನೀಡಿದ್ದಾರೆ.

-masthmagaa.com

Contact Us for Advertisement

Leave a Reply