masthmagaa.com:
ರಾಷ್ಟ್ರರಾಜಧಾನಿ ವಲಯದ ರಸ್ತೆಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಎರಡು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಕ್ಲಾಸ್ ತಗೊಂಡಿದೆ. ಅವರಿಗೆ ಪ್ರತಿಭಟನೆ ಮಾಡಲು ಅಧಿಕಾರ ಇದೆ. ಆದ್ರೆ ರಸ್ತೆಯಲ್ಲಿ ಹೋಗೋರು ಬರೋರಿಗೆ ತೊಂದ್ರೆಯಾಗಬಾರದು. ರಸ್ತೆಯಲ್ಲಿ ಪ್ರತಿಭಟನೆ ನಡೆಸೋದನ್ನು ತಡೆಯಲು ಸಾಧ್ಯವಿಲ್ಲ ಅಂತಾದ್ರೆ, ವಾಹನಗಳ ಓಡಾಟವನ್ನ ಕೂಡ ತಡೆಯಬಾರದು.. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯೋದು ಕೇಂದ್ರ ಸರ್ಕಾರ, ಹರಿಯಾಣ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ಕೈಲಿದೆ ಅಂತ ಕಿಡಿಕಾರಿದೆ.
-masthmagaa.com
Contact Us for Advertisement