masthmagaa.com:
ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಪಾಲ್ಗೊಂಡಿದ್ದರು. ಇನ್ನು ಪ್ರಧಾನಿ ಮೋದಿ, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗಿಯಾಗಿದ್ರು. ಧ್ವಜಾರೋಹಣದ ನಂತ್ರ ರಾಷ್ಟ್ರಪತಿಗಳಿಗೆ 21 ಕುಶಾಲ ತೋಪಿನ ಗೌರವ ನೀಡಲಾಯ್ತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಪ್ರದರ್ಶನಗೊಂಡಿತು.
ಇತ್ತ ರಾಜ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ನಿವಾಸ ಕಾವೇರಿಯಲ್ಲಿ ಧ್ವಜಾರೋಹಣ ನೇರವೆರಿಸಿದರು. ನಂತ್ರ ಎಕ್ಸ್ನಲ್ಲಿ, ʻಸಂವಿಧಾನವನ್ನ ನಾವು ರಕ್ಷಿಸಿದರೆ, ನಮ್ಮನ್ನ ಸಂವಿಧಾನ ರಕ್ಷಿಸುತ್ತೆ. ಸಂವಿಧಾನದ ಬಗ್ಗೆ ತಿಳಿಯೋ ಮೂಲಕ ಅದನ್ನ ಬಲಪಡಿಸೋಣ ಅಂತ ಪೋಸ್ಟ್ ಹಾಕಿದ್ದಾರೆ.
-masthmagaa.com
Contact Us for Advertisement